Site icon Vistara News

ಡಾ. ವಿಜಯ ಸಂಕೇಶ್ವರ ಅವರನ್ನು ಭೇಟಿ ಮಾಡಿದ ಹರಿಪ್ರಕಾಶ್ ಕೋಣೆಮನೆ

Hariprakash konemene meets vijay sankeshwar

ಬೆಂಗಳೂರು: ನಾಡಿನ ಪ್ರಖ್ಯಾತ ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವಿಜಯ ಸಂಕೇಶ್ವರ ಅವರನ್ನು ʼವಿಸ್ತಾರ ನ್ಯೂಸ್ʼ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಮಂಗಳವಾರ ಭೇಟಿ ಮಾಡಿದರು.

ಕನ್ನಡದ ನಂ.1 ದಿನಪತ್ರಿಕೆ ʼವಿಜಯವಾಣಿʼಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ನಡೆದ ಸೌಹಾರ್ದ ಭೇಟಿಯ ಸಂದರ್ಭದಲ್ಲಿ ಡಾ. ವಿಜಯ ಸಂಕೇಶ್ವರ ಅವರು ನೂತನ ದೃಶ್ಯ ಮಾಧ್ಯಮ ‘ವಿಸ್ತಾರ ನ್ಯೂಸ್‌’ಗೆ ಶುಭ ಕೋರಿದರು. ‘ವಿಸ್ತಾರ’ ಮಾಧ್ಯಮ ಕುರಿತ ಮಾಹಿತಿ ಪಡೆದ ಅವರು ಸಂತಸ ವ್ಯಕ್ತಪಡಿಸಿದರು.

“ಮೌಲ್ಯಾಧಾರಿತ ಉದ್ಯಮಿ, ಮಾಧ್ಯಮ ಕ್ಷೇತ್ರದಲ್ಲಿ ನನ್ನ ಪಾಲಿನ ಆದರ್ಶ ಹಾಗೂ ಮಾರ್ಗದರ್ಶಕರಾದ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರನ್ನು ಭೇಟಿ ಮಾಡಿ ಆತ್ಮೀಯವಾಗಿ ಮಾತುಕತೆ ನಡೆಸಿರುವುದು ನನ್ನ ಪಾಲಿಗೆ ಅತ್ಯಂತ ಸಂತಸದ ಸಂಗತಿ” ಎಂದು ಹರಿಪ್ರಕಾಶ್ ಕೋಣೆಮನೆ ಅವರು ಪ್ರತಿಕ್ರಿಯಿಸಿದ್ದಾರೆ.

ವಿಸ್ತಾರ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ.ಎಸ್. ಜತೆಗಿದ್ದರು.

ಇದನ್ನೂ ಓದಿ | ವಿಸ್ತಾರ Explainer | ಸರಕು ಸಾಗಣೆಗೆ ಚೀತಾ ಸ್ಪೀಡ್‌ ನೀಡಲು ಲಾಜಿಸ್ಟಿಕ್ಸ್‌ ನೀತಿ!

Exit mobile version