Site icon Vistara News

Bike Accident | ಬೈಕ್-ಕಾರು ನಡುವೆ ಅಪಘಾತ; ಸಾಗರದ ಬ್ಯಾಕೋಡು ಬ್ಯಾಂಕ್ ಉದ್ಯೋಗಿ ಸಾವು

ಸಾಗರ ಬೈಕ್‌ ಅಪಘಾತ

ಶಿವಮೊಗ್ಗ: ಸಾಗರ ತಾಲೂಕಿನ ಬ್ಯಾಕೋಡು ಸಮೀಪ ಶನಿವಾರ ಬೈಕ್-ಕಾರು ನಡುವೆ ನಡೆದ ಅಪಘಾತದಲ್ಲಿ (Bike Accident) ಬ್ಯಾಂಕ್‌ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ.

ಕಿಶನ್ ಮೃತ ದುರ್ದೈವಿ. ಇವರು ಸಾಗರ ತಾಲೂಕಿನ ಬ್ಯಾಕೋಡು ಸಮೀಪದ ಸುಳ್ಳಳ್ಳಿಯಲ್ಲಿರುವ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು. ಸಾಗರದಿಂದ ಸುಳ್ಳಳ್ಳಿ ಬ್ಯಾಂಕ್‌ಗೆ ತೆರಳುವಾಗ ಬ್ಯಾಕೋಡು ಸಮೀಪ ಈ ಅಪಘಾತ ಸಂಭವಿಸಿದೆ.

ಅಪಘಾತದ ಸಂದರ್ಭದಲ್ಲಿ ಕಿಶನ್‌ಗೆ ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | BMTC Accident | ಕಂಡಕ್ಟರ್ ಅವಾಂತರದಿಂದ ಬಿಎಂಟಿಸಿ ಬಸ್ ಅಪಘಾತ!

Exit mobile version