Site icon Vistara News

ಸಮವಸ್ತ್ರದಲ್ಲೇ ನೇಣು ಬಿಗಿದುಕೊಂಡ ಬಿಎಂಟಿಸಿ ನೌಕರ: ಡಿಪೋ ಮ್ಯಾನೇಜರ್‌ ಕಿರುಕುಳ ಆರೋಪ

bjp

ಬೆಂಗಳೂರು: ಬಿಎಂಟಸಿಯ ನೌಕರರೊಬ್ಬರು ಡಿಪೋ ಆವರಣದಲ್ಲಿ ಸಮವಸ್ತ್ರದಲ್ಲೇ ನೇಣಿಗೆ ಶರಣಾಗಿದ್ದಾರೆ. ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ನೊಂದು ಅವರು ಈ ಕೃತ್ಯ ನಡೆಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.

ಆರ್‌ಆರ್‌ ನಗರ ಡಿಪೋದಲ್ಲಿ ನೌಕರರಾಗಿರುವ ಬಸವಪ್ಪ ಎಂಬವರೇ ಹೀಗೆ ಸಾವಿಗೆ ಶರಣಾದವರು. ಅವರು ಅದೇ ಡಿಪೋದ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಸೋಮವಾರ ಕರ್ತವ್ಯಕ್ಕೆ ಬಂದಿದ್ದ ಅವರು ಆವರಣದಲ್ಲೇ ಇರುವ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಅವರು ಖಾಕಿ ಸಮವಸ್ತ್ರದಲ್ಲೇ ಜೀವ ಕಳೆದುಕೊಂಡಿರುವುದು ಮನ ಕಲಕಿದೆ.

ಬಸವಪ್ಪ ಅವರು ಕಳೆದ ಹಲವು ವರ್ಷಗಳಿಂದ ಬಿಎಂಟಿಸಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರು ಡಿಪೋ ಮ್ಯಾನೇಜರ್‌ ಅವರ ಕಿರುಕುಳದಿಂದ ನೊಂದಿದ್ದರು ಎನ್ನಲಾಗಿದೆ. ಇದರಿಂದಲೇ ಬೇಸತ್ತು ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಅವರು

ಕರ್ತವ್ಯದಲ್ಲಿ ಇದ್ದಾಗಲೇ ಇಲಾಖಾ ಸಮವಸ್ತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಮಾನವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಲಾಗಿದೆ. ಆರ್ ಆರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version