Site icon Vistara News

Road Accident: ಡಿಕ್ಕಿ ರಭಸಕ್ಕೆ ಹೊತ್ತಿ ಉರಿದ ಕಾರು; ಬೆಂಕಿಯಲ್ಲಿ ಸಜೀವ ದಹನಗೊಂಡ ಚಾಲಕ

Car Burnt

ಚಾಮರಾಜನಗರ: ಇಲ್ಲಿನ ಗುಂಡ್ಲುಪೇಟೆಯ ಹಿರೀಕಾಟಿ ಗೇಟ್​ ಬಳಿ ಕಾರೊಂದು ಬೆಂಕಿಯಿಂದ ಹೊತ್ತಿ ಉರಿದು (Car Accident), ಚಾಲಕ ಸಜೀವ ದಹನವಾಗಿದ್ದಾನೆ. ಶನಿವಾರ ರಾತ್ರಿ 10-45ರ ಹೊತ್ತಿಗ ಮೈಸೂರಿನಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಕಾರಿಗೆ ಒಂದು ಟ್ರಕ್​​ ಡಿಕ್ಕಿಯಾಗಿದೆ (Road Accident). ಈ ಡಿಕ್ಕಿ ರಭಸಕ್ಕೆ ಕಾರು ಮತ್ತು ಟ್ರಕ್​ ಎರಡೂ ಬೆಂಕಿಯಿಂದ ಹೊತ್ತಿ ಉರಿದಿವೆ. ಈ ವೇಳೆ ಕಾರು ಚಾಲಕ ಮಿಜಾಮಿಲ್ಲ ಅಹಮದ್ (35) ಅವರು ಸಜೀವ ದಹನಗೊಂಡಿದ್ದಾರೆ. ಚಾಮರಾಜನಗರ ಎಸ್​​ಪಿ ಪದ್ಮಿನಿ ಸಾಹೋ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಶಪಥ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ
ಮಂಡ್ಯ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಜು.1ರಂದು ಇಂಥದ್ದೇ ಒಂದು ಘಟನೆ ನಡೆದಿತ್ತು. ಪಿರಾನ್ ಎಂಬುವರು ಮಕ್ಕಳೊಂದಿಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಶ್ರೀರಂಗಪಟ್ಟಣದ ಗೌರಿಪುರ ಗೇಟ್ ಬಳಿ ಕಾರಿನ ಎಂಜಿನ್​ನಲ್ಲಿ ಸಣ್ಣದಾಗಿ ಹೊಗೆ ಏಳಲು ಶುರುವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಪಿರಾನ್​ ಕಾರು ನಿಲ್ಲಿಸಿದ್ದವರು. ಅಲ್ಲೇ ಸುತ್ತಮುತ್ತ ಇದ್ದವರೆಲ್ಲ ಅಲ್ಲಿಗೆ ಬಂದು ಮಕ್ಕಳನ್ನೆಲ್ಲ ಕಾರಿನಿಂದ ಇಳಿಸಿದ್ದರು. ನೋಡನೋಡುತ್ತಿದ್ದಂತೆ ಕಾರು ದಹಿಸಿಹೋಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದ್ದರು. ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case : ಕುಡಿದು ತಾಯಿಗೆ ಥಳಿಸಿದ ಮಗನನ್ನು ಬಾರಿಗೇ ಹೋಗಿ ಪೆಟ್ರೋಲ್‌ ಹಾಕಿ ಸುಟ್ಟ ಅಪ್ಪ

ರಾಯಚೂರಲ್ಲಿ ಬೈಕ್​ಗಳ ಡಿಕ್ಕಿ, ಸವಾರ ಸಾವು

ರಾಯಚೂರು: ಇಲ್ಲಿನ ದೇವದುರ್ಗ ಪಟ್ಟಣದ ಹೊರವಲಯಲ್ಲಿ ಎರಡು ಬೈಕ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಒಂದು ಬೈಕ್​ನ ಸವಾರ ಬಸವರಾಜ್​ (23) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೊಂದು ಬೈಕ್​ನಲ್ಲಿ ಇದ್ದ ರಾಜು ಮತ್ತು ಅಮರೇಶ್ ಎಂಬುವರಿಗೆ ಗಂಭೀರ ಗಾಯಳಾಗಿವೆ. ಇನ್ನು ಈ ಬಸವರಾಜ್​​ ಜತೆ ಅವನ ಬೈಕ್​ನಲ್ಲಿ ಇನ್ನಿಬ್ಬರು ಇದ್ದರು. ಅವರಿಗೂ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version