Site icon Vistara News

ಹಾದಿಹೋಕರನ್ನು ಮನಬಂದಂತೆ ಕೊಚ್ಚಿಹಾಕಿದ ವಿಕೃತ! ಚಿಕ್ಕಬಳ್ಳಾಪುರದಲ್ಲಿ ಘಟನೆ

knife attack

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಮುಸುಕುಧಾರಿ ಬೈಕ್‌ ಸವಾರನೊಬ್ಬ ದಾರಿಯಲ್ಲಿ ಸಿಕ್ಕವರಿಗೆ ಮಾರಕಾಸ್ತ್ರದಿಂದ ಕೊಚ್ಚುತ್ತಾ ಹೋದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಚಿಕ್ಕಬಳ್ಳಾಪುರ ನಗರದ ಬಜಾರ್ ರಸ್ತೆ ಹಾಗೂ ಬಿಬಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೆಲ್ಮೆಟ್‌ಧಾರಿಯಾಗಿದ್ದ ಬೈಕ್‌ ಸವಾರ ದಾರಿಹೋಕರ ಮೇಲೆ ಮನಸ್ಸಿಗೆ ಬಂದಂತೆ ಚಾಕು ಬೀಸಿದ್ದಾನೆ. ದುಷ್ಕರ್ಮಿ ಕಪ್ಪು ಬಣ್ಣದ ಬೈಕ್‌ನಲ್ಲಿ ಆಗಮಿಸಿದ್ದ ಎಂಬುದು ಗೊತ್ತಾಗಿದೆ.

ಚಿಕ್ಕಬಳ್ಳಾಪುರ ನಗರದ ಮನೋಹರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಎಸಗಿದ್ದಾನೆ. ಹತ್ತಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ಚಿಕ್ಕಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಷ್ಟು ಮಂದಿ ದಾಳಿಗೀಡಾಗಿದ್ದು, ಹೆಚ್ಚಿನ ಗಾಯಗಳಿಲ್ಲದೆ ಪಾರಾಗಿದ್ದಾರೆ.

ದುಷ್ಕರ್ಮಿಯ ಪತ್ತೆಗೆ ಬಲೆ ಬೀಸಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು, ಘಟನೆ ನಡೆದ ಪ್ರದೇಶದ ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಗಾಯಾಳುಗಳಿಂದ ವ್ಯಕ್ತಿಯ ಅಂದಾಜು ಚೆಹರೆಯನ್ನು ಪಡೆಯುವಲ್ಲಿ ಸಫಲರಾಗಿದ್ದು, ಶೀಘ್ರದಲ್ಲಿ ಪಾತಕಿಯನ್ನು ಹಿಡಿಯುವುದಾಗಿ ತಿಳಿಸಿದ್ದಾರೆ.

Exit mobile version