Site icon Vistara News

Transgender issue : ಕಂಡಕ್ಟರ್‌ ಜತೆ ಕಿರಿಕ್‌; ನಡು ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾದ ಮಂಗಳಮುಖಿ

Transgender News

ಚಿಕ್ಕಬಳ್ಳಾಪುರ: ಬಸ್‌ ಕಂಡಕ್ಟರ್‌ ಜತೆ ಕಿರಿಕ್‌ ಮಾಡಿಕೊಂಡ ಮಂಗಳಮುಖಿಯೊಬ್ಬಳು (Transgender issue) ನಡುರಸ್ತೆಯಲ್ಲಿ ಬಟ್ಟೆ ಬಿಚ್ಚಿ ತನ್ನ ಆಕ್ರೋಶವನ್ನು (Transgender becomes Naked) ತೋರ್ಪಡಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ (Chikkaballapura News) ಶಿಡ್ಲಘಟ್ಟ ವೃತ್ತದಲ್ಲಿ ನಡೆದಿದೆ. ತಮಿಳುನಾಡು ಮೂಲದ ಸ್ಮಿತಾ ಎಂಬ ಮಂಗಳಮುಖಿಯೇ ಹೀಗೆ ವರ್ತಿಸಿದವಳು.

ಸ್ಮಿತಾ ಚೆನ್ನೈ ಮೂಲದವಳು. ಚಿಕ್ಕಬಳ್ಳಾಪುರದಲ್ಲಿರುವ ಈಶ ಫೌಂಡೇಷನ್‌ಗೆ ಸೇರಿದ ಶಿವನ ಮೂರ್ತಿಯ ದರ್ಶನ ಮತ್ತಿತರ ಚಟುವಟಿಕೆಗಳಿಗಾಗಿ ಆಕೆ ಇಲ್ಲಿಗೆ ಬಂದಿದ್ದಳು. ಅಲ್ಲಿ ಸೋಮವಾರ ವಿಶೇಷ ಕಾರ್ಯಕ್ರಮವೂ ಇತ್ತು.

ಮಂಗಳವಾರ ಸ್ಮಿತಾ ಬಸ್‌ ಹತ್ತಿದ್ದಳು. ಬಸ್‌ ಹತ್ತಿದ ಆಕೆಗೂ ಆ ಬಸ್ಸಿನ ಕಂಡಕ್ಟರ್‌ ಗೂ ಜಗಳ ಶುರುವಾಗಿದೆ. ಲಗೇಜ್‌ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳ ಶುರುವಾಗಿದ್ದು ರಣರಂಪವಾಗಿದೆ. ಈ ಗಲಾಟೆಯ ಮಧ್ಯೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ ಆಕೆ ಕಂಡಕ್ಟರ್‌ಗೆ ಕಪಾಳ ಮೋಕ್ಷ ಮಾಡಿದ್ದಾಳೆ.

ತಡೆಯಲು ಬಂದ ಇತರ ಪ್ರಯಾಣಿಕರ ಜತೆಗೆ ಅಸಭ್ಯವಾಗಿ ವರ್ತಿಸಿದ ಆಕೆಯ ಉಪಟಳ ಸಹಿಸಲಾಗದೆ ಆಕೆಯನ್ನು ಪ್ರಯಾಣಿರಕರೆಲ್ಲ ಸೇರಿ ಶಿಡ್ಲಘಟ್ಟ ವೃತ್ತದಲ್ಲಿ ಇಳಿಸಿದರು. ಇದರಿಂದ ಕನಲಿ ಕೆಂಡವಾದ ಸ್ಮಿತಾ ಕೂಡಲೇ ತಾನು ಉಟ್ಟಿದ್ದ ಚೂಡಿದಾರ್‌ನ ಟಾಪನ್ನು ಬಿಚ್ಚಿದ ಆಕೆ ನಗ್ನ ದೇಹ ಪ್ರದರ್ಶನ ಮಾಡುತ್ತಾ ಕಂಡಕ್ಟರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಆಕೆ ಹಾಗೆ ಬಟ್ಟೆ ಬಿಚ್ಚುತ್ತಿದ್ದಂತೆಯೇ ನೂರಾರು ಜನರು ಅಲ್ಲಿ ಸೇರಿದರು. ಎಲ್ಲರೂ ಕುತೂಹಲದಿಂದ ಗಲಾಟೆಯನ್ನು ಗಮನಿಸುತ್ತಿದ್ದಾಗ ಪೊಲೀಸರು ಧಾವಿಸಿ ಆಕೆಗೆ ಬಟ್ಟೆ ಧರಿಸುವಂತೆ ಒತ್ತಾಯಿಸಿದರು. ಆಕೆ ಕೊನೆಗೆ ಶಾಲನ್ನು ಹೊದ್ದುಕೊಂಡಳು. ಆದರೂ ಆಗಾಗ ಕಂಡಕ್ಟರ್‌ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ ಶಾಲು ತೆರೆಯವುದನ್ನು ಮುಂದುವರಿಸಿದ್ದಳು. ಕೊನೆಗೆ ಆಕೆಯನ್ನು ಪೊಲೀಸರು ಕರೆದುಕೊಂಡು ಹೋದರು.

Road Accident : ಸಂಕ್ರಾಂತಿ ಸಂಭ್ರಮ ಮುಗಿಸಿ ಬರುವಾಗ ಅಪಘಾತ; ತಂದೆ, ಪುಟ್ಟ ಮಗಳು ಮೃತ್ಯು

ಬೆಂಗಳೂರು: ನೆಲಮಂಗಲ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ತಂದೆ ಮತ್ತು ಐದು ವರ್ಷದ ಮಗಳು (Father and daughter Dead) ಮೃತಪಟ್ಟಿದ್ದಾರೆ. ಬೈಕ್‌ ಡಿವೈಡರ್‌ಗೆ ಡಿಕ್ಕಿ (Bike hits Divider) ಹೊಡೆದು ಸಂಭವಿಸಿದ ದುರಂತ ಇದಾಗಿದೆ.

ಬೆಂಗಳೂರಿನ ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ತಂದೆ-ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿಗೆ ಗಂಭೀರ ಗಾಯಗಳಾಗಿವೆ.

ಬೆಂಗಳೂರಿನ ಚಿಕ್ಕಪೇಟೆಯ ಅಮಿತ್ (32) ಹಾಗೂ 5 ವರ್ಷದ ಮಗಳು ಅನಿತಾ ಮೃತಪಟ್ಟವರು. ಅಮಿತ್ ಪತ್ನಿ ಕುಸುಮಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ತಂದೆ ಹಾಗೂ ಮಗಳ ಇಬ್ಬರ ತಲೆಗೂ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರು.

ಅಮಿತ್‌ ಮತ್ತು ಕುಸುಮಾ ಅವರು ತಮ್ಮ ಪುಟ್ಟ ಮಗಳೊಂದಿಗೆ ಸಂಕ್ರಾಂತಿ ಹಬ್ಬಕ್ಕೆಂದು ಊರಿಗೆ ಹೋಗಿದ್ದರು. ಅಲ್ಲಿಂದ ಹಬ್ಬ ಮುಗಿಸಿ ಮರಳುವಾಗ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ ಪ್ಲೈಓವರ್ ಮೇಲೆ ಅವರು ಚಲಾಯಿಸುತ್ತಿದ್ದ ಬೈಕ್‌ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ತಂದೆ, ಮಗಳು ಸ್ಥಳದಲ್ಲೇ ಮೃತಪಟ್ಟರೆ, ತಾಯಿಯ ಸ್ಥಿತಿ ಗಂಭೀರವಾಗಿದೆ.

Exit mobile version