Site icon Vistara News

ಕಾಂಗ್ರೆಸ್‌ನಲ್ಲಿದೆ ಬೂಟ್ ನೆಕ್ಕೋ ಕಲ್ಚರ್ ಎಂದ ಸಿ.ಟಿ.ರವಿ

ಸಿ.ಟಿ.ರವಿ

ಚಿಕ್ಕಮಗಳೂರು: ಬೂಟ್ ನೆಕ್ಕೋ ಕಲ್ಚರ್ ಕಾಂಗ್ರೆಸ್‌ನಲ್ಲಿದೆ. ಅಂತಹವರು ಮಾತ್ರ ಪಕ್ಷದಲ್ಲಿ ಉಳಿಯುತ್ತಾರೆ. ಗುಲಾಮಗಿರಿ ಮನಸ್ಥಿತಿಯುಳ್ಳವರು ಗುಲಾಮಗಿರಿಗೆ ಸೇರುತ್ತಾರೆ, ಆ ಮನಸ್ಥಿತಿಯವನಲ್ಲ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ವಿರುದ್ಧ ಬಿಜೆಪಿ ನಾಯಕ ಸಿ.ಟಿ.ರವಿ ಹರಿಹಾಯ್ದರು.

ತಮ್ಮ ಸ್ಥಾನದಲ್ಲಿ ಸಿ.ಟಿ.ರವಿ ಇದ್ದಿದ್ದರೆ ಪೊಲೀಸರ ಬೂಟು ನೆಕ್ಕುತ್ತಿದ್ದರು ಎಂಬ ಯುತ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ನನ್ನ ಹಿನ್ನೆಲೆ ಗೊತ್ತಿಲ್ಲ ಅನ್ನಿಸುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬರೂ ಬಿಜೆಪಿ ಶಾಸಕ ಇರಲಿಲ್ಲ. ರಾಜ್ಯದಲ್ಲಿ ಕೇವಲ ಒಬ್ಬನೇ ಒಬ್ಬ ಬಿಜೆಪಿ ಶಾಸಕ ಇದ್ದಾಗ ನಾನು ಬಿಜೆಪಿ ಸೇರಿದೆ. ಜನಸಂಘಟನೆ, ಹೋರಾಟ ಮಾಡಿ ಶಾಸಕನಾಗಿದ್ದೇನೆ ಹೊರತು ಯಾರಿಗೋ ಬಕೆಟ್‌ ಹಿಡಿದು ಚೇಲಾ ರಾಜಕಾರಣ ಮಾಡಿದವನಲ್ಲ. ಬೂಟು ನೆಕ್ಕೋ ರಾಜಕಾರಣದ ಕಲ್ಚರ್ ಬಿಜೆಪಿಯಲ್ಲಿ ಇಲ್ಲ, ಇಲ್ಲಿ ಪಕ್ಷ ನಿಷ್ಠೆ ಇದ್ದರೆ ಯಾವ ಎತ್ತರಕ್ಕೆ ಬೇಕಾದರೂ ಬೆಳೆಯಬಹುದು. ಆದರೆ ಕಾಂಗ್ರೆಸ್‌ನಲ್ಲಿ ಬೂಟ್‌ ನೆಕ್ಕುವವರು ಮಾತ್ರ ಉಳಿಯುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ | ʻಹಿಂದೂ ಯುವಕರು ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ.. ಹೀಗಾಗಿ ಆಕೆ ಬಚಾವಾಗಿದ್ದಾಳೆʼ: ಸಿ.ಟಿ.ರವಿ ವಿವಾದಿತ ಹೇಳಿಕೆ

Exit mobile version