Site icon Vistara News

Crime News: ವೈಯಕ್ತಿಕ ದ್ವೇಷ, ಕರುಣೆಯಿಲ್ಲದೆ ಕಾಫಿ ತೋಟ ಕೊಚ್ಚಿ ಹಾಕಿದರು!

coffee estate

ಚಿಕ್ಕಮಗಳೂರು: ವೈಯಕ್ತಿಕ ದ್ವೇಷ ಹಾಗೂ ಜಮೀನು ವ್ಯಾಜ್ಯದ ಕಾರಣದಿಂದ ಕಾಫಿ ತೋಟವನ್ನು ಕಿಡಿಗೇಡಿಗಳು ಲಾಂಗು, ಮಚ್ಚು ಹಿಡಿದು ಕೊಚ್ಚಿ ಹಾಕಿ ನಾಶ ಮಾಡಿದ ಘಟನೆ ಎನ್‌.ಆರ್‌ ಪುರದಲ್ಲಿ ನಡೆದಿದೆ.

ಎನ್ ಆರ್ ಪುರ ತಾಲೂಕಿನ ನೇಮನಹಳ್ಳಿ ಗ್ರಾಮದಲ್ಲಿ ರಮೇಶ್ ಗೌಡ ಎಂಬವರಿಗೆ ಸೇರಿದ ಕಾಫಿ ತೋಟವನ್ನು ಹೀಗೆ ನಾಶ ಮಾಡಲಾಗಿದೆ. ಜಮೀನು ವಿಚಾರವಾಗಿ ವೈಯುಕ್ತಿಕ ದ್ವೇಷಕ್ಕೆ ಈ ದುಷ್ಕೃತ್ಯ ನಡೆಸಲಾಗಿದೆ ಎಂದು ರಮೇಶ್‌ ಗೌಡ ದೂರಿದ್ದಾರೆ. ಸಂದರ್ಶ ಕಾರಗದ್ದೆ, ಮನೋರಂಜನ್, ಸತ್ಯನಾರಾಯಣ ಸೇರಿದಂತೆ ಹಲವರ ವಿರುದ್ಧ ದೂರು ನೀಡಲಾಗಿದೆ.

ದುಷ್ಕರ್ಮಿಗಳು ಮಧ್ಯರಾತ್ರಿ ಜೀಪು ನುಗ್ಗಿಸಿ ತೋಟದ ಬೇಲಿ ಮುರಿದು ಒಳನುಗ್ಗಿದ್ದಾರೆ. ಲಾಂಗು, ಮಚ್ಚು ಬೀಸಿ ಬಾಳೆ ಹಾಗೂ ಕಾಫಿ ಗಿಡಗಳನ್ನು ಕೊಚ್ಚಿ ನಾಶ ಮಾಡಿದ್ದಾರೆ. ತೋಟದ ಪಕ್ಕದಲ್ಲಿದ್ದ ಮನೆಯ ಮೇಲೆ ಕಲ್ಲು ತೂರಾಟ ಮಾಡಿ ಹಾನಿಯೆಸಗಿದ್ದಾರೆ. ತೋಟದ ಮಾಲೀಕರು ಬೆಳೆ ನಾಶದ ವಿಡಿಯೋ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ಆತ್ಮಹತ್ಯೆ ಮಾಡಿಕೊಂಡ ಅತ್ತೆ ಮಗಳಿಗೆ ನ್ಯಾಯ ಕೊಡಿಸಲು ಆತ್ಮಹತ್ಯೆಗೆ ಯತ್ನಿಸಿದ ಯುವಕ

Exit mobile version