Site icon Vistara News

Death Case : ಕಾಫಿ ತೋಟದ ಮ್ಯಾನೇಜರ್ ಮೃತದೇಹ ಕೆರೆಯಲ್ಲಿ ಪತ್ತೆ, ಕೊಲೆ ಶಂಕೆ

Dead body found in plantation

ಚಿಕ್ಕಮಗಳೂರು: ಇಲ್ಲಿನ ಕಾಫಿ ತೋಟದ (Coffee Plantation) ಮ್ಯಾನೇಜರ್ ಒಬ್ಬರ ಮೃತದೇಹ (Death Case) ಪ್ಲಾಂಟೇಷನ್‌ನ ಕೆರೆಯಲ್ಲಿ ಪತ್ತೆಯಾಗಿದ್ದು ಕುಟುಂಬಿಕರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಬಾಳೆಹೊನ್ನೂರು ಸಮೀಪದ ಖಾನ್ಗೋಡು ನಲ್ಲಿ ಘಟನೆ ನಡೆದಿದೆ. ಮ್ಯಾನೇಜರ್‌ ಕಾಶಿ ಬೊಪ್ಪಯ್ಯ (59) ಅವರ ಶವ ಕೆರೆಯಲ್ಲಿ ಪತ್ತೆಯಾಗಿದೆ. ಮ್ಯಾನೇಜರ್ ಚಪ್ಪಲಿ, ಪರ್ಸ್ ಕೆರೆಯ ದಡದಲ್ಲಿ ಪತ್ತೆಯಾಗಿದೆ.

ಕಾಶಿ ಬೊಪ್ಪಯ್ಯ ಅವರು ಕೊಡಗು ಸಮೀಪದ ಟಿ ಶೆಟ್ಟಿಗೇರಿ ಗ್ರಾಮದವರಾಗಿದ್ದು, ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಮನೆಯವರು ದೂರು ನೀಡಿದ್ದರು. ಇದೀಗ ಅವರ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೊಂದು ಅನುಮಾನಾಸ್ಪದ ಸಾವು ಎಂದು ಮನೆಯವರು ಹೇಳಿದ್ದಾರೆ. ಅವರಿಗೆ ಅತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಕಾರಣಗಳು ಇರಲಿಲ್ಲ. ಅವರನ್ನು ಯಾರೋ ಕೊಲೆ ಮಾಡಿರಬಹುದು ಎಂಬ ಸಂಶಯವನ್ನು ಮನೆಯವರು ವ್ಯಕ್ತಪಡಿಸಿದ್ದಾರೆ.

ದನ ತೊಳೆಯಲು ಹೋಗಿ ನೀರುಪಾಲಾದ ಬಾಲಕರು; ಇಬ್ಬರ ಮೃತದೇಹ ಪತ್ತೆ

ಗದಗ: ಸ್ವಾತಂತ್ರ್ಯ ದಿನಾಚರಣೆಯ (Independence day) ಸಂಭ್ರಮದ ನಡುವೆಯೇ ರಜೆಯ ದಿನ ದನದ ಮೈತೊಳೆಯಲೆಂದು ಹೋಗಿ ಕೆರೆಯ ನೀರಿನಲ್ಲಿ ಮುಳುಗಿದ್ದ (Drowned in Pond) ಇಬ್ಬರು ಬಾಲಕರ ಮೃತದೇಹಗಳನ್ನು (two Boys dead) ಮೇಲೆತ್ತಲಾಗಿದೆ.

ಗದಗನ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಂಡದಲ್ಲಿ ಮಹ್ಮದ್ ಅಮನ್ ಹುಬ್ಬಳ್ಳಿ (12) ಹಾಗೂ ಸಂತೋಷ್ ಕುಂಬಾರ (14) ಎಂಬ ಬಾಲಕರು ನೀರುಪಾಲಾದವರು. ಮಂಗಳವಾರ ಮಧ್ಯಾಹ್ನದ ಹೊತ್ತು ಮಹಿಳೆಯೊಬ್ಬರು ದನಗಳ ಮೈತೊಳೆಯಲು ಕೃಷಿ ಹೊಂಡಕ್ಕೆ ತೆರಳಿದ್ದರು. ಆಗ ಅಮನ್‌, ಸಂತೋಷ್‌ ಮತ್ತು ಇನ್ನೊಬ್ಬ ಹುಡುಗ ಕೂಡಾ ಅವರ ಜತೆಗೆ ತೆರಳಿದ್ದರು.

ಈ ವೇಳೆ ಯಾರೋ ಒಬ್ಬ ಬಾಲಕ ನೀರಿಗೆ ಬಿದ್ದು ಮುಳುಗೇಳುತ್ತಿದ್ದ. ಅವನನ್ನು ರಕ್ಷಿಸಲೆಂದು ಮಹಿಳೆ ಮತ್ತು ಇತರ ಇಬ್ಬರು ನೀರಿಗೆ ಹಾರಿದ್ದಾರೆ. ಆದರೆ ನಾಲ್ಕೂ ಮಂದಿ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾರೆ. ಈ ವೇಳೆ ಆ ಭಾಗದಲ್ಲಿದ್ದ ಕೆಲವರು ಓಡಿ ಹೋಗಿ ಮಹಿಳೆ ಮತ್ತು ಒಬ್ಬ ಬಾಲಕನನ್ನು ರಕ್ಷಿಸಲಾಯಿತು. ಆದರೆ, ಇನ್ನಿಬ್ಬರ ಶವವೂ ಸಿಕ್ಕಿರಲೇ ಇಲ್ಲ.

ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಮಧ್ಯಾಹ್ನದಿಂದ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಯ ಸಾಹಸದ ಫಲವಾಗಿ ತಡರಾತ್ರಿಯ ಹೊತ್ತು ಇಬ್ಬರು ಬಾಲಕರಲ್ಲಿ ಒಬ್ಬನಾದ ಸಂತೋಷ್ ಕುಂಬಾರn (14) ಮೃತದೇಹ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಸಿದಾಗ ಇನ್ನೊಬ್ಬ ಬಾಲಕ ಶವ ಪತ್ತೆಯಾಗಿದೆ.

Exit mobile version