Site icon Vistara News

Murder Case: ಆಸ್ತಿ ಮಾರಿದ ಹಣಕ್ಕಾಗಿ ಮಚ್ಚಿನೇಟು, ಇಬ್ಬರ ಕೊಲೆ

Murder Case 2

ಚಿಕ್ಕಮಗಳೂರು: ಆಸ್ತಿ ಮಾರಿದ ಹಣಕ್ಕಾಗಿ ಮೂವರ ಮೇಲೆ ಮಚ್ಚಿನಿಂದ ಹಲ್ಲೆ (assault) ನಡೆದಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ (Murder Case). ಓರ್ವನ ಸ್ಥಿತಿ ಗಂಭೀರವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. 12‌ ಲಕ್ಷ ರೂ. ಹಣಕಾಸಿನ ವಿಚಾರ ಕೊಲೆಯಲ್ಲಿ ಅಂತ್ಯವಾಗಿದೆ. ಪಾಪಿ ಪುತ್ರ ಆಸ್ತಿ ಹಣಕ್ಕಾಗಿ ತನ್ನ ತಂದೆ ಹಾಗೂ ಆಸ್ತಿ ಮಾರಾಟದ ಮಧ್ಯವರ್ತಿಯನ್ನು ಕೊಂದುಹಾಕಿದ್ದಾನೆ.

ಪಾತಕಿಯ ಹೆಸರು ಸಂತೋಷ್‌. ಸಂತೋಷ್‌ ಹಾಗೂ ಆತನ ತಂದೆಗೆ ಸೇರಿದ ಜಮೀನನ್ನು ಮಾರಾಟ ಮಾಡಲು ಕಾರ್ತಿಕ್‌ (45) ಎಂಬವರು ಮಧ್ಯಸ್ಥಿಕೆ ವಹಿಸಿದ್ದರು. ಆಸ್ತಿ ಮಾರಿ ಬಂದ ಹಣದಲ್ಲಿ ಪಾಲಿನ ವಿಚಾರವಾಗಿ ಜಗಳ ಹುಟ್ಟಿಕೊಂಡಿದ್ದು, ಈ ಸಂದರ್ಭದಲ್ಲಿ ಸಂತೋಷ್‌ ತನ್ನ ತಂದೆ ಭಾಸ್ಕರ್‌ ಗೌಡ, ತಾಯಿ ಹಾಗೂ ಮಧ್ಯವರ್ತಿ ಕಾರ್ತಿಕ್‌ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಮೂವರಿಗೂ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ತಂದೆ ಹಾಗೂ ಕಾರ್ತಿಕ್‌ ಸಾವಿಗೀಡಾಗಿದ್ದಾರೆ. ತಾಯಿ ಸ್ಥಿತಿ ಗಂಭೀರವಾಗಿದೆ. ಮಚ್ಚಿನಿಂದ ಹಲ್ಲೆ ನಡೆಸಿ ಸಂತೋಷ್‌ ನೇರವಾಗಿ ಠಾಣೆಗೆ ಹೋಗಿದ್ದಾನೆ. ಬಾಳೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೇಮಿ ಜೊತೆ ಸೇರಲು ಪತಿಯನ್ನು ಸಜೀವ ಜಲಸಮಾಧಿ ಮಾಡಿದ ಪತ್ನಿ!

ಚಿಕ್ಕಮಗಳೂರು: ಪ್ರೇಮಿ ಜೊತೆ ಸೇರುವುದಕ್ಕಾಗಿಯೇ ಪತ್ನಿಯೊಬ್ಬಳು ಪತಿಯನ್ನು ಅರೆಪ್ರಜ್ಞಾವಸ್ಥೆಯಲ್ಲಿ ತಂದು ಕೆರೆಗೆ ಎಸೆದು ಸಾಯಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ಈಕೆ ಪಾವನ ಎಂಬ ಹೆಸರಿಟ್ಟುಕೊಂಡು ಪಾತಕದ ಕೆಲಸ ಎಸಗಿದ್ದಾಳೆ. ನವೀನ್ (28) ಪತ್ನಿಯ ಕಣ್ಣಾಮುಚ್ಚಾಲೆ ಆಟಕ್ಕೆ ಬಲಿಯಾದ ಪತಿ. ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಪತ್ನಿಯ ಮೇಲೆ ಅನುಮಾನ ಮೂಡಿತ್ತು.

ಪ್ರೇಮಿ ಸಂಜಯ್ ಎಂಬಾತನ ಜೊತೆ ಅನೈತಿಕ ವ್ಯವಹಾರ ಇಟ್ಟುಕೊಂಡಿದ್ದ ಪಾವನಳ ಕಣ್ಣಾಮುಚ್ಚಾಲೆ ಆಟಕ್ಕೆ ಪತಿ ನವೀನ್‌ ಅಡ್ಡಗಾಲಾಗುತ್ತಿದ್ದ. ಆತನನ್ನು ನಿವಾರಿಸಿಕೊಳ್ಳಲು ಪ್ರೇಮಿ ಸಂಜಯ್ ಜೊತೆ ಸೇರಿ ಪತಿಯನ್ನು ಮುಗಿಸಲು ಪಾವನ ಸಂಚು ಹೂಡಿದ್ದಳು. ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದಳು. ಪ್ರಜ್ಞೆ ತಪ್ಪಿದ ಪತಿಯನ್ನು ಪ್ರೇಮಿ ಜೊತೆ ಬೈಕಿನಲ್ಲಿ ತಂದು ಕೆರೆಗೆ ಎಸೆದಿದ್ದಳು. ಪೊಲೀಸರ ತನಿಖೆಯಲ್ಲಿ ಪಾವನ ಮತ್ತು ಸಂಜಯ್ ಈ ವಿಚಾರ ಬಾಯಿಬಿಟ್ಟಿದ್ದಾರೆ. ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Murder attempt : ರಾಜಕೀಯ ವೈಷಮ್ಯ; ದೇವಸ್ಥಾನದಲ್ಲೇ ಡ್ಯಾಗರ್‌ ಚುಚ್ಚಿ ಜೆಡಿಎಸ್‌ ಮುಖಂಡನ ಕೊಲೆ ಯತ್ನ

Exit mobile version