Site icon Vistara News

Property dispute: 2 ಅಡಿ ಜಾಗಕ್ಕಾಗಿ ಕುಟುಂಬಗಳ ಮಾರಾಮಾರಿ, ಗಂಭೀರ ಗಾಯ

fight over land

ಚಿಕ್ಕಮಗಳೂರು: ಕೇವಲ 2 ಅಡಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಮನಸೋ ಇಚ್ಛೆ ಗುದ್ದಲಿ, ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ದೊಡ್ಡ ಲಿಂಗದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಜಾಗದ ವಿಚಾರಕ್ಕೆ ಹೆಂಗಸರು ಮಕ್ಕಳು ಎನ್ನದೆ ದಾಳಿ ನಡೆಸಲಾಗಿದ್ದು, ಮಾರಾಮಾರಿಯಲ್ಲಿ ಗಾಯತ್ರಿ ಬಾಯಿ, ಅಮರ್ ನಾಯ್ಕ್, ರಾಮನಾಯ್ಕ್‌ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಹಲ್ಲೆ ಮಾಡಿದ ಮಂಜನಾಯ್ಕ, ಉಮೇಶ್ ನಾಯ್ಕ, ಅಣ್ಣನಾಯ್ಕ, ತೇಜು ಪರಾರಿಯಾಗಿದ್ದಾರೆ.

ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದು, ಎಸ್‌ಪಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Assault Case: ದೇವಸ್ಥಾನ ಪ್ರವೇಶ; ದಲಿತ ಸಮುದಾಯಕ್ಕೆ ಸೇರಿದ ತಾಯಿ, ಮಗನ ಮೇಲೆ ಹಲ್ಲೆ

Exit mobile version