Site icon Vistara News

Porcupine: ಮುಳ್ಳುಹಂದಿ ಗುಹೆಯಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು

porcupine

ಚಿಕ್ಕಮಗಳೂರು: ಇಕ್ಕಟ್ಟಾದ ಗುಹೆಯಲ್ಲಿ ಮುಳ್ಳುಹಂದಿ ಹಿಡಿಯಲು ಹೋಗಿ ಇಬ್ಬರು ಸಾವಿಗೀಡಾಗಿದ್ದಾರೆ. ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಬಳಿ.

ವಿಜಯ್ (28) ಹಾಗೂ ಶರತ್ (26) ಮೃತ ಕಾರ್ಮಿಕರು. ಇವರು ಕಾಳು ಮೆಣಸು ಕೊಯ್ಯುವ ಕೆಲಸಕ್ಕೆ ತಮಿಳುನಾಡಿನಿಂದ ಬಂದಿದ್ದ ಕಾರ್ಮಿಕರು. ಮುಳ್ಳುಹಂದಿ ಹಿಡಿಯಲು ಅದು ಇದ್ದ ಗುಹೆಗೆ ನಾಲ್ವರು ಕಾರ್ಮಿಕರು ಬೆಂಕಿ ಹಾಕಿದ್ದರು. ನಂತರ ನಾಲ್ವರೂ ಒಳಗೆ ನುಗ್ಗಿದ್ದರು. ನಾಲ್ವರ ಪೈಕಿ ಇಬ್ಬರು ಸಾವಿಗೀಡಾಗಿದ್ದಾರೆ. ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಟ್ಟಾರಣ್ಯಕ್ಕೆ ಹೋಗಿ ಬಂಡೆಗಳ ಮಧ್ಯೆ ಗುಹೆಯಲ್ಲಿ ಸಿಕ್ಕಿಬಿದ್ದ ಯುವಕ; ಇದು ಪಕ್ಕಾ ‘ಹನಿಟ್ರ್ಯಾಪ್​’!

Exit mobile version