Site icon Vistara News

Heart Attack: ಬೆಳಗ್ಗೆ ಬಡ್ತಿ ಸ್ವೀಕರಿಸಿದ ಅಧಿಕಾರಿ ಸಂಜೆ ಹೃದಯಾಘಾತದಿಂದ ಸಾವು!

jayaprakash heartfail

ಧಾರವಾಡ: ಪ್ರಮೋಷನ್ ಆಗಿ ಪದೋನ್ನತಿ ಸ್ವೀಕರಿಸಿದ ದಿನವೇ ಹೃದಯಾಘಾತದಿಂದ (Heart attack) ಸರ್ಕಾರಿ ಅಧಿಕಾರಿಯೊಬ್ಬರು ನಿಧನರಾದ ಮನಕಲಕುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಜಯಪ್ರಕಾಶ್ ಕಲಕೋಟಿ ನಿಧನರಾದ ಅಧಿಕಾರಿ. ಈ ಮೊದಲು ಜಯಪ್ರಕಾಶ್‌ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಖಜಾನೆ‌‌ ಕಚೇರಿಯಲ್ಲಿದ್ದರು. ಕಳೆದ 15 ದಿನಗಳ ಹಿಂದೆ ಅವರಿಗೆ ಪ್ರಮೋಷನ್ ಆಗಿತ್ತು.

ನಿನ್ನೆ ಅವರು ಧಾರವಾಡ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ‌‌ ಮಾಡಿದ್ದರು. ಸಂಜೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಬೆಳಿಗ್ಗೆ ಅಧಿಕಾರ ಸ್ವೀಕರಿಸಿ ಮನೆಗೆ ಮರಳಿದ ಅವರನ್ನು ಹೃದಯಾಘಾತದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಸಂಜೆ ಮೃತಪಟ್ಟಿದ್ದಾರೆ.

ವಿಷಾಹಾರ ಸೇವನೆ, ಒಬ್ಬ ಸಾವು

ಚಿಕ್ಕೋಡಿ: ಹಿರೆಕೋಡಿ ಗ್ರಾಮದಲ್ಲಿ ನಡೆದ ಫುಡ್‌ ಪಾಯಿಸನ್ (food poison) ಪ್ರಕರಣದಲ್ಲಿ, ಊಟ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಒಬ್ಬರು ಸಾವಿಗೀಡಾಗಿದ್ದಾರೆ. ಶಬ್ಬಿರ ಮಕಾಂದಾರ (58) ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ಪಟೇಲ್ ಎಂಬವರ ಮದುವೆ ಸಮಾರಂಭದಲ್ಲಿ ಘಟನೆ ನಡೆದಿತ್ತು.

ಆಗಸ್ಟ್‌ 28ರಂದು ಮದುವೆ ಮನೆಯಲ್ಲಿ ಊಟ ಸೇವಿಸಿ ನೂರಾರು ಜನ ಅಸ್ವಸ್ಥಗೊಂಡಿದ್ದರು. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಬ್ಬಿರ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಬ್ಬಿರ ಮಕಾಂದಾರ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: Vijayanagara News: ಹಾವು ಕಡಿದು ವಿದ್ಯಾರ್ಥಿ ಸಾವು

Exit mobile version