Site icon Vistara News

Self Harm: ಬಸ್‌ ನಿಲ್ದಾಣದಲ್ಲೇ ನೇಣಿಗೆ ಶರಣಾದ ಸಾರಿಗೆ ನಿಯಂತ್ರಕ

Lover refused to marriage Young woman committed suicide in kalaburagi

ಚಿಕ್ಕೋಡಿ: ಕೆಎಸ್‌ಆರ್‌ಟಿಸಿಯ ಸಾರಿಗೆ ನಿಯಂತ್ರಕರೊಬ್ಬರು ಬಸ್ ನಿಲ್ದಾಣದಲ್ಲಿಯೇ ನೇಣಿಗೆ ಶರಣಾದ (self harm) ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿರುವ ಬಸ್ ನಿಲ್ದಾಣದಲ್ಲಿ ನಡೆದಿದೆ.

ಶಿವಾನಂದ ಭಜಂತ್ರಿ ನೇಣಿಗೆ ಶರಣಾಗಿರುವ ಸಾರಿಗೆ ನಿಯಂತ್ರಕ. ರಾಯಭಾಗ ಬಸ್ ನಿಲ್ದಾಣದಲ್ಲಿಯೇ ಇವರು ಮೆಟ್ಟಿಲುಗಳ ನಡುವೆ ಕಿಟಕಿ ಸರಳಿಗೆ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ರಾಯಭಾಗ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಗೆ ಕಚ್ಚಿದ ಹಾವು, ಪತ್ನಿಯ ಸಾವು!

ಮಂಗಳೂರು: ಪತಿಗೆ ಹಾವು ಕಡಿತದ ಸುದ್ದಿ ಕೇಳಿ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.

ಸೇಸಮ್ಮ (60) ಹೃದಯಾಘಾತದಿಂದ ಮೃತಪಟ್ಟ ಮಹಿಳೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ನಡೆದ ಘಟನೆಯಾಗಿದೆ. ನೆಲ್ಯಾಡಿಯ ಪದ್ಮಯ್ಯ ಎಂಬವರಿಗೆ ಹಾವು ಕಡಿದಿತ್ತು. ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಡಿದಿತ್ತು. ತಕ್ಷಣ ಪದ್ಮಯ್ಯರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಚಾರ ತಿಳಿದ ಪತ್ನಿ ಸೇಸಮ್ಮಗೆ ಹೃದಯಾಘಾತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಇದೇ ವೇಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಮೂರು ಹಾವುಗಳನ್ನು ಸ್ನೇಹಿತರೆನ್ನುವಂತೆ ಕೈಯಲ್ಲೇ ಹಿಡಿದುಕೊಂಡ ಯುವತಿ!

Exit mobile version