Site icon Vistara News

Chitradurga News: ಮನೆ ಮುಂದೆ ನಾಯಿ ಹೊಲಸು ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಚೂರಿ ಇರಿತ!

Chitradurga News

ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಚಾಕು ಇರಿದಿರುವ ಘಟನೆ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಬರಗೇರಿ ಬೀದಿಯಲ್ಲಿ ನಡೆದಿದೆ. ಮನೆ ಮುಂದೆ ನಾಯಿ ಹೊಲಸು ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಚೂರಿ ಇರಿಯಲಾಗಿದ್ದು, ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೊಟ್ರೇಶಪ್ಪ ನಗರದ ಬರಗೇರಿ ಬೀದಿ ನಿವಾಸಿ ಕೊಟ್ರೇಶಪ್ಪ (46) ಹಲ್ಲೆಗೊಳಗಾದವರು. ನವೀನ್ ಚಾಕು ಇರಿದ ಆರೋಪಿ. ಕೊಟ್ರೇಶಪ್ಪ ಮನೆ ಮುಂದೆ ನವೀನ್ ಎಂಬಾತನ ನಾಯಿ ಗಲೀಜು ಮಾಡಿತ್ತು. ಇದನ್ನು ಕೊಟ್ರೇಶಪ್ಪ ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಕೋಪಗೊಂಡ ಆರೋಪಿ ನವೀನ್ ಹಾಗೂ ಪತ್ನಿ ತೇಜಸ್ವಿನಿ ಸೇರಿ ಕೊಟ್ರೇಶಪ್ಪ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳು ನವೀನ್ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ | Tipper Accident: ಟಯರ್‌ ಬ್ಲಾಸ್ಟ್‌ ಆಗಿ ಟಿಪ್ಪರ್ ಪಲ್ಟಿ; ರಸ್ತೆ ಬದಿ ನಿಂತಿದ್ದ ಒಂದೇ ಕುಟುಂಬದ ಐವರ ದುರ್ಮರಣ

ಪ್ರೇಮಿಸಿ, ಕಾಮಿಸಿದವನಿಗೆ ಮದುವೆ ಆಗು ಎಂದರೆ.. ನನ್ನ-ನಿನ್ನ ನಡುವೆ ಏನಿಲ್ಲ ಎಂದ

ಬೆಂಗಳೂರು: ಬೆಂಗಳೂರಿನಲ್ಲೊಂದು ಲವ್, ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ. ಟೆಕ್ಕಿಗೆ ಮದುವೆ ಆಗುವುದಾಗಿ ನಂಬಿಸಿ (Love Story) ಯುವಕನೊಬ್ಬ ವಂಚಿಸಿರುವ ಘಟನೆ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ 27 ವರ್ಷದ ಯುವತಿಗೆ ಆದಿತ್ಯನಾಥ ಸಿಂಗ್ ಎಂಬಾತ ವಂಚಿಸಿರುವ ಆರೋಪ ಕೇಳಿ ಬಂದಿದೆ. ಯುವತಿಗೆ ಆರೋಪಿಯ ಪರಿಚಯವು ಜಿಮ್‌ವೊಂದರಲ್ಲಿ ಆಗಿತ್ತು. ಪರಿಚಯದ ಸ್ನೇಹವು ನಿಧಾನವಾಗಿ ಪ್ರೀತಿಗೆ ತಿರುಗಿತ್ತು. ಅದು ಮುಂದುವರಿದು ಇಬ್ಬರು ಲಿವಿಂಗ್ ಟು ಗೆದರ್ ರಿಲೇಷನ್ ಶಿಪ್‌ನಲ್ಲಿದ್ದರು. ಮೊದಲಿನ ಒಂದು ವರ್ಷ ಎಲ್ಲವೂ ಚೆನ್ನಾಗಿ ಇತ್ತು.

ಆದರೆ ಯಾವಾಗ ಯುವತಿ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಳೋ ಆದಿತ್ಯನಾಥ ಸಿಂಗ್ ವರಸೆಯೇ ಬದಲಾಗಿತ್ತು. ಮದುವೆಗೆ ನಿರಾಕರಿಸಿದ್ದಲ್ಲದೇ, ಮದುವೆಗೆ ಬಲವಂತ ಮಾಡಿದ ಯುವತಿಗೆ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಇರಿದು ನಂತರ ತಲೆ ಹಿಡಿದು ಗೋಡೆಗೆ ಚಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಇನ್ನೂ ಸಂತ್ರಸ್ತೆಯು ಪ್ರಿಯಕರನ ತಂದೆ-ತಾಯಿಯನ್ನು ಸಂಪರ್ಕಿಸಲು ಮುಂದಾಗಿದ್ದಕ್ಕೆ ಸಿಟ್ಟಾದ ಯುವಕ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಸದ್ಯ ಯುವತಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು ದೂರು

ಇದನ್ನೂ ಓದಿ: Voting Awareness : ಸಾಲು ಸಾಲು ರಜೆ; ಮತದಾನಕ್ಕೆ ಚಕ್ಕರ್ ಹಾಕಿ, ಔಟಿಂಗ್ ಹೋದ್ರೆ ಬರುತ್ತೆ ನೋಟಿಸ್

Exit mobile version