Site icon Vistara News

Farmer Leader: ರೈತ ನಾಯಕ ನುಲೇನೂರು ಎಂ.ಶಂಕರಪ್ಪ ನಿಧನ

nulenuru shankarappa

ಚಿತ್ರದುರ್ಗ: ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ (farmer leader) ಟಿ.ನುಲೇನೂರು ಎಂ.ಶಂಕರಪ್ಪ (Nulenuru Shankarappa) ನಿಧನರಾಗಿದ್ದಾರೆ.

ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ಶಂಕರಪ್ಪ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾದರು. ಪತ್ನಿ, ವೈದ್ಯ ಡಾ.ರವಿಶಂಕರ್ ಸೇರಿದಂತೆ ಇಬ್ಬರು ಪುತ್ರರು,
ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.

ಅಂತಿಮ ಸಂಸ್ಕಾರಗಳು ಇಂದು ಶಂಕರಪ್ಪ ಹುಟ್ಟೂರು ಹೊಳಲ್ಕೆರೆ ತಾಲ್ಲೂಕಿನ ಟಿ.ನುಲೇನೂರು ಗ್ರಾಮದಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ 10.30ಕ್ಕೆ ಡಿಸಿ ವೃತ್ತದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Rahul Gandhi : ಭಾರತ್‌ ಜೋಡೊ ವೇಳೆ ರಾಹುಲ್‌ಗೆ ಸೌತೆ ಕಾಯಿ ನೀಡಿದ್ದ ಶಾರದಮ್ಮ ಇನ್ನಿಲ್ಲ

Exit mobile version