Site icon Vistara News

ಶಿವರಾಜ್‌ ಪಾಟೀಲ್‌ ಮೂರ್ಖ ಎಂದ ಕಾಂಗ್ರೆಸ್‌, ಅವರು ಲೆಕ್ಕಕ್ಕಿಲ್ಲ ಎಂದ ಬಿಜೆಪಿ

MLA Shivaraj patil

ಬೆಂಗಳೂರು: ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂಬ ಕುರಿತು ಈ ಹಿಂದೆ ಶಾಸಕ ಶಿವರಾಜ್‌ ಪಾಟೀಲ್‌ ಹೇಳಿಕೆ ವಿಡಿಯೊ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದು ಶಿವರಾಜ್‌ ಪಾಟೀಲ್‌ ಹೇಳಿದ್ದು, ಅವನು ಮೂರ್ಖ, ಮಾನಸಿಕ ಅಸ್ವಸ್ಥ. ಕರ್ನಾಟಕ ಏಕೀಕರಣದ ಬೆಲೆ ಗೊತ್ತಾ ಅವನಿಗೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಪ್ರಭಾರಿ ಅರುಣ್‌ ಸಿಂಗ್‌ ಸಹ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಶಿವರಾಜ್ ಪಾಟೀಲ್, ಯಾವುದೇ ನಿರ್ಧಾರ ‌ಕೈಗೊಳ್ಳುವವರಲ್ಲ. ಅವರು ಹೇಳಿದಾಕ್ಷಣ ರಾಯಚೂರು ತೆಲಂಗಾಣಕ್ಕೆ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಲು ಅಲ್ಲಿನವರೇ ಕೇಳುತ್ತಿದ್ದಾರೆಂದ ಕೆಸಿಆರ್; ವಿವಾದದ ಮೂಲ ಬಿಜೆಪಿ ಶಾಸಕ!

Exit mobile version