Site icon Vistara News

Karnataka Election 2023: ಕೌಂಟರ್ ವಿಡಿಯೊ ಸಾಂಗ್ ಮಾಡಿ ಬಿಜೆಪಿ ಸಾಧನೆಗಳನ್ನು ಅಣಕಿಸಿದ ಕಾಂಗ್ರೆಸ್‌

bjp karnataka ticket may be announced wednesday

#image_title

ಬೆಂಗಳೂರು: ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಬಿಡುಗಡೆಯಾಗಿದ್ದ ವಿಡಿಯೊ ಮಾದರಿಯಲ್ಲಿ ವಿಡಿಯೊ ಮಾಡುವ ಮೂಲಕ ಬಿಜೆಪಿ ಸರ್ಕಾರವನ್ನು (Karnataka Election 2023) ಕಾಂಗ್ರೆಸ್‌ ಅಣಕಿಸಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇತ್ತೀಚೆಗೆ ರಾಜ್ಯ ಬಿಜೆಪಿ, ʼಕನ್ನಡಿಗರ ಕಣ ಕಣದಲ್ಲೂ ಮೊಳಗಲಿದೆ ಬಿಜೆಪಿʼ ಎಂಬ ಶೀರ್ಷಿಕೆಯಲ್ಲಿ ಪ್ರಚಾರ ವಿಡಿಯೊವನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳು, ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಜತೆಗೆ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಲಾಗಿತ್ತು.

ಬಿಜೆಪಿ ಬಿಡುಗಡೆ ಮಾಡಿರುವ ವಿಡಿಯೊ

ಇದನ್ನೂ ಓದಿ | Modi in Karnataka: ಹೆದ್ದಾರಿ ಉದ್ಘಾಟನೆಗೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ: ಡಿ.ಕೆ.ಸುರೇಶ್ ಕಿಡಿ

ಇದೀಗ ಬಿಜೆಪಿ ವಿಡಿಯೋ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್‌ ಘಟಕ ಕೂಡ ಒಂದು ವಿಡಿಯೊವನ್ನು ಅಣಕಿಸಿದೆ. ಈ ವಿಡಿಯೊಗೆ ʼಸಿ.ಟಿ. ರವಿ ಅರ್ಪಿಸುವ, ಪ್ರತಾಪ್‌ ಸಿಂಹ ಹಾಡಿರುವ, ಬೊಮ್ಮಾಯಿ ಸಂಯೋಜಿಸಿರುವ, ನರೇಂದ್ರ ಮೋದಿ ನಿರ್ಮಿಸಿರುವ ʼಜಯ ಭಾರತ ಜನಜಾತಿಯ ಜನರಿಗಾಗಿʼ ಎಂಬ ಶೀರ್ಷಿಕೆ ನೀಡಲಾಗಿದೆ.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ವಿಡಿಯೊ

ಕಾಂಗ್ರೆಸ್‌ನ ವಿಡಿಯೊದಲ್ಲಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ನಡೆದ ಕಾರ್ಯಕ್ರಮವೊಂದರಲ್ಲಿ ನಾಡಗೀತೆ ಹೇಳಿರುವುದರ ಬಗ್ಗೆ ವ್ಯಂಗ್ಯ ಮಾಡಲಾಗಿದೆ. 40 ಪರ್ಸೆಂಟ್‌, ಕೋಮುವಾದ, ಕೋವಿಡ್‌ ಹಗರಣ, ಕಳಪೆ ರಸ್ತೆಗಳೆಂದರೆ ಬಿಜೆಪಿ ಎಂದು ಆರೋಪಿಸಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Exit mobile version