Site icon Vistara News

Cooker Blast:‌ ರಾಮನಗರದಲ್ಲಿ ಎಲೆಕ್ಷನ್‌ ಪ್ರಚಾರದ ವೇಳೆ ಕೊಟ್ಟಿದ್ದ ಕುಕ್ಕರ್‌ ಸ್ಫೋಟ; ಬಾಲಕಿಗೆ ಗಂಭೀರ ಗಾಯ

cooker blast

cooker blast

ರಾಮನಗರ: ರಾಮನಗರ ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಕುಕ್ಕರ್ ಸ್ಫೋಟಗೊಂಡು (Cooker Blast) ಬಾಲಕಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ಮಹಾಲಕ್ಷ್ಮಿ (17) ಗಾಯಾಳು ಬಾಲಕಿ.

ಶುಕ್ರವಾರ (ಮೇ 26) ಬೆಳಗ್ಗೆ ಮಹಾಲಕ್ಷ್ಮಿ ಅನ್ನ‌ ಮಾಡಲೆಂದು ಕುಕ್ಕರ್‌ಗೆ ಅಕ್ಕಿಯನ್ನು ಹಾಕಿದ್ದಾಳೆ. ಸ್ಟವ್‌ ಮೇಲೆ ಇಟ್ಟ, ಸ್ವಲ್ಪ ಸಮಯದಲ್ಲೇ ಕುಕ್ಕರ್‌ ಸ್ಫೋಟಗೊಂಡಿದೆ. ಕುಕ್ಕರ್‌ ಸಿಡಿದು ಬಾಲಕಿಯ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳು ಮಹಾಲಕ್ಷ್ಮಿಯನ್ನು ರಾಮನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಕುಕ್ಕರ್ ಸ್ಫೋಟಗೊಂಡು ಬಾಲಕಿಗೆ ಗಂಭೀರ ಗಾಯ

ಇದನ್ನೂ ಓದಿ: Bear Attack: ವಾಕಿಂಗ್‌ ಹೋದ ಮಹಿಳೆ ಮೇಲೆ ಕರಡಿ ದಾಳಿ; ತುಮಕೂರಲ್ಲಿ ಚಿರತೆ ಆಯ್ತು ಈಗ ಕತ್ತೆಕಿರುಬ ಪ್ರತ್ಯಕ್ಷ

ಎಲೆಕ್ಷನ್‌ನಲ್ಲಿ ಹಂಚಿದ್ದ ಕುಕ್ಕರ್‌

ವಿಧಾನಸಭೆ ಚುನಾವಣೆ ವೇಳೆ ಅಭ್ಯರ್ಥಿಯೊಬ್ಬರು ಮನೆ ಮನೆಗೆ ಕುಕ್ಕರ್‌ ಹಂಚಿದ್ದರು ಎನ್ನಲಾಗಿದೆ. ಎಲೆಕ್ಷನ್‌ನಲ್ಲಿ ನೀಡಿದ್ದ ಕುಕ್ಕರ್‌ನಲ್ಲಿ ಅಡುಗೆ ಮಾಡಲು ಹೋಗಿ ಈ ಅವಘಡ ನಡೆದಿದೆ ಎನ್ನಲಾಗಿದೆ. ಕಳಪೆ ಕುಕ್ಕರ್‌ ನೀಡಿದ್ದೆ ಇದಕ್ಕೆಲ್ಲ ಕಾರಣವೆಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಬೆಂಗಳೂರಿನ ಕೆಲವು ಕಡೆಗಳಲ್ಲಿ ಕೂಡಾ ರಾಜಕಾರಣಿಗಳು ಕಳಪೆ ಕುಕ್ಕರ್‌ ಹಂಚಿದ್ದಾರೆ ಎಂಬ ಆರೋಪ ಎದುರಾಗಿತ್ತು. ಕೆಲವರಂತೂ ಅವರು ಕೊಟ್ಟಿದ್ದು ಕಳಪೆ ಕುಕ್ಕರ್‌. ಅದರಲ್ಲಿ ಅಡುಗೆ ಮಾಡಿದರೆ ಸ್ಫೋಟಗೊಂಡೀತು. ನಾವು ಹೊಸದಾದ, ಬ್ರಾಂಡೆಡ್‌ ಕುಕ್ಕರ್‌ ನೀಡುತ್ತೇವೆ ಎಂದು ಹೇಳಿದ್ದರು. ಕೆಲವು ಕಡೆ ಅವುಗಳನ್ನು ರಿಪ್ಲೇಸ್‌ ಕೂಡಾ ಮಾಡಲಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version