Site icon Vistara News

Crime News | ಬೈಕ್‌ ಟಚ್‌ ಆಗಿದ್ದಕ್ಕೆ ಹಲ್ಲೆ; ಕೋಮಾಕ್ಕೆ ಜಾರಿದ ಬೈಕ್‌ ಸವಾರ

crime news

ಬೆಂಗಳೂರು: ಬೈಕ್‌ನಲ್ಲಿ ಹೋಗುವಾಗ ತಾಗಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಬೈಕ್‌ ಸವಾರನ ಮೇಲೆ ಹಲ್ಲೆ ನಡೆಸಿರುವ (Crime News) ಘಟನೆ ನಡೆದಿದ್ದು, ಹಲ್ಲೆಗೊಳಗಾದವ ಕೋಮಾಕ್ಕೆ ಜಾರಿದ್ದಾರೆ.

ಇಲ್ಲಿನ ಸಂಪಂಗಿರಾಮನಗರದಲ್ಲಿ ಸುರೇಶ್‌ ಎಂಬುವವರು ಬೈಕ್‌ನಲ್ಲಿ ಹೋಗುವಾಗ ಮಂಜುನಾಥ್‌ ಎಂಬುವವರಿಗೆ ತಗುಲಿದೆ. ಈ ವೇಳೆ ಇಬ್ಬರ ನಡುವೆ ಕೆಲ ಕಾಲ ವಾಗ್ವಾದ ನಡೆದಿದ್ದು, ಸ್ಥಳೀಯರು ಗಲಾಟೆ ತಡೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ ಇಬ್ಬರ ಗಲಾಟೆ ಅತಿರೇಕಕ್ಕೆ ತಿರುಗಿ ಒಬ್ಬರಿಗೊಬ್ಬರು ಕೊರಳಿನ ಪಟ್ಟಿ ಹಿಡಿಯುವ ಮಟ್ಟಕ್ಕೆ ಹೋಗಿದೆ. ಬಳಿಕ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ.

ಬೈಕ್‌ ಸವಾರ ಸುರೇಶ್‌ ಹಾಗೂ ಪಾದಚಾರಿ ಮಂಜುನಾಥ್‌ ನಡುವೆ ಮಾತಿನ ಚಕಮಕಿಯ ಚಿತ್ರ

ಕುಪಿತಗೊಂಡ ಮಂಜುನಾಥ್‌ ಬೈಕ್ ಸವಾರ ಸುರೇಶ್‌ ಅವರನ್ನು ತಳ್ಳಿದ್ದಾರೆ. ಮಂಜುನಾಥ್ ತಳ್ಳಿದ ರಭಸಕ್ಕೆ ಸುರೇಶ್ ತಲೆಗೆ ಗಂಭೀರ ಪೆಟ್ಟಾಗಿದೆ. ಪರಿಣಾಮ ಕೋಮಾ ಸ್ಥಿತಿಗೆ ತಲುಪಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸುರೇಶ್ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುರೇಶ್ ಬಿಬಿಎಂಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿರುವ ಮಂಜುನಾಥ್‌ ಅವರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | NCRB Report | ಗುರುತು ಮಾಹಿತಿ ಕಳ್ಳತನ: ದೇಶದಲ್ಲೇ ಬೆಂಗಳೂರು ನಗರ ನಂಬರ್ 1

Exit mobile version