Site icon Vistara News

Crime News | ಪ್ರೀತ್ಸೆ ಪ್ರೀತ್ಸೆ ಅಂದ ಪಾಗಲ್‌ ಪ್ರೇಮಿ ಚಾಕು ಇರಿದ; ತಾನೂ ಇರಿದುಕೊಂಡ!

ramanagara lover attack

ರಾಮನಗರ: ಇದೊಂದು ಹುಚ್ಚು ಪ್ರೇಮಿಯ ವಿಕೃತ ರೂಪ. ಪ್ರೀತ್ಸೆ.. ಪ್ರೀತ್ಸೆ ಅಂತ ಹಿಂದೆ ಬಿದ್ದ. ಕೊನೆಗೆ ಅವನ ಕಾಟ ತಾಳಲಾರದೆ ಯುವತಿ ಕೆಲಸವನ್ನೇ ಬಿಟ್ಟಿದ್ದಳು. ಆದರೂ, ಪೀಡಿಸುತ್ತಿದ್ದ ಯುವಕ ಕೊನೆಗೆ ಆಕೆಯ ಮನೆಗೆ ನುಗ್ಗಿ ಚಾಕು (Crime News) ಇರಿದಿದ್ದು, ಬಳಿಕ ತಾನೂ ಚಾಕು ಇರಿದುಕೊಂಡಿದ್ದಾನೆ. ಚನ್ನಪಟ್ಟಣ ತಾಲೂಕಿನ ಕೋಟೆ ನಗರದಲ್ಲಿ ಪ್ರಕರಣ ನಡೆದಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇಘನಾ ಚಾಕು ಇರಿತಕ್ಕೆ ಒಳಗಾಗಿರುವ ಯುವತಿ. ವೆಂಕಟೇಶ್‌ ಎಂಬ ಯುವಕ ಚಾಕು ಇರಿದಿದ್ದು, ತಾನೂ ಇರಿದುಕೊಂಡಿದ್ದಾನೆ. ಮೇಘನಾ ಮತ್ತು ವೆಂಕಟೇಶ್‌ ಸಂಗೀತಾ ಮೊಬೈಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಮಧ್ಯೆ ಮೇಘನಾ ಮೇಲೆ ವೆಂಕಟೇಶ್‌ಗೆ ಪ್ರೀತಿ ಮೂಡಿದೆ. ಈ ಸಂಬಂಧ ಆತ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ಮೇಘನಾ ಈತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಆದರೂ ಸುಮ್ಮನಾಗದ ವೆಂಕಟೇಶ್‌ ಪದೇಪದೆ ಪೀಡಿಸಿದ್ದರಿಂದ ಈಕೆ ಮೂರು ತಿಂಗಳ ಹಿಂದೆ ಕೆಲಸವನ್ನೇ ಬಿಟ್ಟಿದ್ದಳು.

ಕೆಲಸ ಬಿಟ್ಟರೂ ಬೆಂಬಿಡದ ವೆಂಕಟೇಶ್‌
ವೆಂಕಟೇಶ್‌ ಸಹವಾಸವೇ ಸಾಕೆಂದು ಕೆಲಸ ಬಿಟ್ಟಿದ್ದ ಮೇಘನಾ ಮನೆಯಲ್ಲಿದ್ದರೂ ಈತನ ಕಾಟ ತಪ್ಪಿರಲಿಲ್ಲ. ಮತ್ತೆ ಮತ್ತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಕೊನೆಗೆ ಮಂಗಳವಾರ (ಸೆ.೧೩) ನೇರವಾಗಿ ಮೇಘನಾ ಮನೆಗೆ ಹೋಗಿ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದಾನೆ. ಆದರೆ, ಆಕೆ ಅದಕ್ಕೆ ಒಪ್ಪದೇ ಇದ್ದಾಗ ಕುಪಿತಗೊಂಡಿದ್ದು, ತಾನು ತಂದಿದ್ದ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಆತನಿಂದ ಯುವತಿ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿಬಂದಾಗ ತಾನೂ ಸಹ ಕುತ್ತಿಗೆ ಇರಿದುಕೊಂಡಿದ್ದಾನೆ. ಸದ್ಯ ಇಬ್ಬರಿಗೂ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನಪಟ್ಟಣ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ | Crime News | ಹಶೀಷ್‌ ಆಯಿಲ್‌, ಗಾಂಜಾ ಮಾರಾಟ; ಆಂಧ್ರದಲ್ಲಿ ಆರೋಪಿಗಳ ಅರೆಸ್ಟ್‌

Exit mobile version