Site icon Vistara News

CT Ravi : ನಿಮ್ಮನ್ನು ಡಿಕೆ ಬದಲು ಕೇಡಿ ಅನ್ಬೋದಲ್ವ; ಲೂಟಿ ರವಿ ಕಮೆಂಟ್‌ಗೆ ಸಿ.ಟಿ ರವಿ ತಿರುಗೇಟು

CT Ravi DK Shivakumar

ಚಿಕ್ಕಮಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಕೇಡಿ ತರ ಆಡಬಾರದು. ಕೇಡಿಯ ರೀತಿಯಲ್ಲಿ ನಡೆದುಕೊಳ್ಳುವುದು ಒಳ್ಳೆಯ ಲಕ್ಷಣ ಅಲ್ಲ. ಅವ್ರ ಪಕ್ಷಕ್ಕೂ ಒಳ್ಳೆಯ ಲಕ್ಷಣ ಅಲ್ಲ. ರಾಜ್ಯಕ್ಕಂತೂ ಒಳ್ಳೆಯ ಲಕ್ಷಣವಂತೂ ಅಲ್ವೇ ಅಲ್ಲ: ಹೀಗೆಂದು ಹೇಳಿದ್ದಾರೆ ಡಿ.ಕೆ. ರವಿ ಅವರಿಂದ ಲೂಟಿ ರವಿ ಎಂದು ದೂಷಣೆಗೆ ಒಳಗಾದ ಬಿಜೆಪಿ ನಾಯಕ ಸಿ.ಟಿ. ರವಿ (CT Ravi).

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್‌ ಅವರ ಮಾತು ಮತ್ತು ವರ್ತನೆಗಳನ್ನು ಆಕ್ಷೇಪಿಸಿದರು. ತಮ್ಮನ್ನು ಲೂಟಿ ರವಿ ಎಂದು ಕರೆದ ಡಿಕೆಶಿ ಅವರನ್ನು ಅವರದೇ ಹೆಸರನ್ನು ತಿರುಗಿಸಿ ʻಕೇಡಿʼ ಎಂದು ವ್ಯಾಖ್ಯಾನಿಸಿದರು. ನಿಮ್ಮನ್ನು ಡಿಕೆ ಬದಲು ಕೇಡಿ ಎಂದು ಕರೆಯಬಹುದಲ್ವಾ ಎಂದು ಕೇಳಿದ್ದಾರೆ ಸಿ.ಟಿ ರವಿ.

ʻʻಐಟಿ ದಾಳಿಯಲ್ಲಿ ಸಿಕ್ಕಿರುವುದು ಕಾಂಗ್ರೆಸ್‌ನವರ ಬೇನಾಮಿ ಹಣ ಎನ್ನುವುದು ನಮಗೆ ಬಂದಿರುವ ವರದಿ. ಇವ್ರೇ ನಂಬರ್1, ನಂಬರ್2 ಬೇನಾಮಿಗಳ ಮೂಲಕ ಸಂಗ್ರಹಿಸಿರುವ ಹಣ ಎಂದು ನಮಗೆ ಬಂದಿರುವ ಮಾಹಿತಿ. ನಮ್ಮದು ಆರೋಪ. ಅದನ್ನು ನಿರಾಕರಿಸುವ ಅಧಿಕಾರ ಅವರಿಗಿದೆ. ನಿರಾಕರಿಸುವ ಭರದಲ್ಲಿ ಕುಮಾರಸ್ವಾಮಿ ಅವ್ರಿಗೆ ನಕಲಿ ಸ್ವಾಮಿ ಅಂತಾ ಹೇಳೋದು, ಆಶ್ವಥ್ ನಾರಯಣ್ ಅವ್ರಿಗೆ ನವರಂಗಿ ನಾರಾಯಣ ಅನ್ನೋದು., ನನಗೆ ಸಿ.ಟಿ ತೆಗೆದು ಲೂಟಿ ಅನ್ನೋದು ಹಂಗಾದ್ರೆ ನಿಮ್ಮ ಡಿಕೆ ತೆಗೆದು ಕೇಡಿ ಅನ್ನಬಹುದಲ್ವ?ʼʼ ಎಂದು ಸಿ.ಟಿ ರವಿ ಪ್ರಶ್ನೆ ಮಾಡಿದ್ದಾರೆ.

ಅವರೇನು ರಾಕ್ಷಸ ವಂಶಸ್ಥರಾ? ಕೇಡಿ ವಂಶಕ್ಕೆ ಸೇರಿದವರಾ?

ʻʻಅವರು ಕೇಡಿ ಮನಸ್ಥಿತಿಯಲ್ಲಿ ವಿವರಿಸುವುದನ್ನು ಬಿಡಬೇಕು. ಉಪಮುಖ್ಯಮಂತ್ರಿ ತಮಗಿರುವ ಜವಬ್ದಾರಿಯ ಅರಿವಿಟ್ಟು ನಡೆದುಕೊಳ್ಳಬೇಕು. ಅದನ್ನ ಬಿಟ್ಟು ಹೆದರಿಸುವ, ಬೆದರಿಸುವ, ರಾಜಕಾರಣ ಮಾಡಬಾರದು. ಇಲ್ಲಿ ಹೆದರೋಕೆ ಬೆದರೋಕೆ ಯಾರಿದ್ದಾರೆ? ಅವ್ರೇನು ರಾಕ್ಷಸ ವಂಶಕ್ಕೆ ಸೇರಿದವರಾ? ಕೇಡಿ ವಂಶಕ್ಕೆ ಸೇರಿದವ್ರಾ?ʼʼ ಎಂದು ಪ್ರಶ್ನಿಸಿದರು.

ʻʻಅಷ್ಟಕ್ಕೂ ನನ್ನ ಆಸ್ತಿ ಸಾವಿರಾರು ಕೋಟಿ ಏನಿಲ್ಲ. ಲೂಟಿ ಯಾರು ಮಾಡಿದ್ಧಾರೆ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ‌. ಆದಾಯದಲ್ಲಿ ಅಜಗಜಾಂತರ ಆಗಿರುವುದು ಯಾರದ್ದು ಡಿ.ಕೆ ಶಿವಕುಮಾರ್ ಅವರೇ? ನೀವು ಏನು ಮಾತನಾಡ್ತೀರೋ ಅದು ನಿಮಗೆ ಅನ್ವಯವಾಗುತ್ತದೆʼʼ ಎಂದು ಎಚ್ಚರಿಸಿದರು.

ಇದನ್ನು ಓದಿ: DK Shivakumar : ನಕಲಿ ಸ್ವಾಮಿ, ಲೂಟಿ ರವಿ, ಮಾಜಿ ಸಿಎಂ, ಬ್ಲಾಕ್ ಮೇಲರ್ ಎಲ್ಲರಿಗೂ ಉತ್ತರ ಕೊಡ್ತೇನೆ ಎಂದ ಡಿಕೆಶಿ

ಬಿಜೆಪಿ ಕಚೇರಿ ಟಾರ್ಗೆಟ್‌ ಆಗುವುದು ಸಹಜ

ಶಿವಮೊಗ್ಗ ಮೂಲದ ಉಗ್ರರು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯನ್ನು ಟಾರ್ಗೆಟ್‌ ಮಾಡಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ ಅವರು, ವಿಶ್ವ ಹಿಂದೂ ಪರಿಷತ್, ಬಿಜೆಪಿ ಮತ್ತು ಆರೆಸ್ಸೆಸ್‌ ಉಗ್ರರಿಗೆ ಟಾರ್ಗೆಟ್ ಆಗಿರುವುದು ಸಹಜ. ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನು ಟಾರ್ಗೆಟ್ ಮಾಡಿದ್ದರೆ ಆಶ್ಚರ್ಯವಿಲ್ಲʼʼ ಎಂದು ಸಿ.ಟಿ. ರವಿ ಹೇಳಿದರು.

ʻʻನಾವು ರಾಷ್ಟ್ರೀಯ ವಿಚಾರವನ್ನು ಹೊಂದಿರುವ ಕಾರಣಕ್ಕೆ ಟಾರ್ಗೆಟ್ ಮಾಡಿದ್ದರೆ ಆಶ್ಚರ್ಯವೇನಿಲ್ಲ. ಮತಾಂಧ ಮುಸಲ್ಮಾನರು, ಮತಾಂಧ ಭಯೋತ್ಪಾದಕರು ಭಾರತವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಹಿಂದುಗಳನ್ನು ಟಾರ್ಗೆಟ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಭಾರತವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮೀರ್‌ ಕಾಸಿಂ ಕಾಲದಿಂದಲೂ ಟಾರ್ಗೆಟ್‌ ನಡೆದೇ ಇದೆ. ಭಾರತವನ್ನು ಇಸ್ಲಾಮಿಕರಣ ಮಾಡುವುದೇ ಅವರ ಉದ್ದೇಶವಾಗಿದೆʼʼ ಎಂದು ಹೇಳಿದರು ಸಿ.ಟಿ. ರವಿ.

Exit mobile version