Site icon Vistara News

Cylinder blast : ಡ್ರೈನೇಜ್‌ ಕಾಮಗಾರಿ ವೇಳೆ ಮನೆಯೊಳಗಿದ್ದ ಎರಡು ಸಿಲಿಂಡರ್‌ ಸ್ಫೋಟ, ಇಬ್ಬರಿಗೆ ಗಂಭೀರ ಗಾಯ

Cylinder blast

#image_title

ಬೆಂಗಳೂರು: ಮನೆಯೊಳಗಿದ್ದ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡು (Cylinder blast) ಮನೆಗೆ ಹಾನಿಯಾಗಿದ್ದಲ್ಲದೆ, ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಎಚ್.ಎಸ್.ಆರ್ ಲೇಔಟ್ ಮದೀನಾ ಮಸೀದಿ ಬಳಿ ನಡೆದಿದೆ. ಈ ಘಟನೆಗೂ ಮನೆಯ ಹೊರಗಡೆ ನಡೆಯುತ್ತಿರುವ ಡ್ರೈನೇಜ್‌ ಕಾಮಗಾರಿಗೂ ಸಂಬಂಧವಿದೆ ಎನ್ನುವುದು ನಂತರ ಬಯಲಿಗೆ ಬಂತು.

ಜಮೀರ್ ಅಹಮದ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ಸ್ಫೋಟ ನಡೆದಿದೆ. ಲೈಖಾ ಅಂಜುಮ್(45) ಮುಬಾಸಿರಾ (40) ಎಂಬ ಮಹಿಳೆಯರು ಮನೆಯ ಅಡುಗೆ ಕೋಣೆಗೆ ಅಡುಗೆ ಮಾಡಲೆಂದು ಹೋದಾಗ ಒಮ್ಮಿಂದೊಮ್ಮೆಗೇ ಸ್ಫೋಟ ಸಂಭವಿಸಿದೆ.

ಮನೆಯೊಳಗೆ ಇದ್ದ ಎರಡು ಅಡುಗೆ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಮನೆಯೊಳಗಿದ್ದ ಕೆಲ‌ ವಸ್ತುಗಳು ಬೆಂಕಿಗಾಹುತಿಯಾಗಿವೆ. ಗಾಯಗೊಂಡ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗೇಲ್‌ ಗ್ಯಾಸ್‌ ಪೈಪ್‌ಲೈನ್‌ಗೆ ಡ್ಯಾಮೇಜ್‌ ಆಗಿದ್ದೇ ಸಮಸ್ಯೆಯ ಮೂಲ

ಎಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಮೀರ್‌ ಅಹಮದ್‌ ಅವರಿಗೆ ಸೇರಿದ ಮನೆಯ ಮುಂದೆ ಬಿಬಿಎಂಪಿಯಿಂದ ಡ್ರೈನೇಜ್‌ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ನಡೆಯುತ್ತಿದ್ದಾಗಲೇ ಒಮ್ಮಿಂದೊಮ್ಮೆಗೇ ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿದೆ.

ಮನೆಯ ಹೊರಗಡೆ ನಡೆಯುತ್ತಿರುವ ಡ್ರೈನೇಜ್‌ ಕಾಮಗಾರಿ. ಇಲ್ಲಿ ಕಾಮಗಾರಿ ನಡೆಯುತ್ತಲೇ ಮನೆಯೊಳಗೆ ಸಿಲಿಂಡರ್‌ಗಳು ಸ್ಫೋಟಗೊಂಡಿವೆ

ಡ್ರೈನೇಜ್‌ ಕಾಮಗಾರಿಯ ವೇಳೆ ಅದೇ ಜಾಗದಲ್ಲಿ ಅಳವಡಿಸಲಾಗಿರುವ ಗೇಲ್‌ ಗ್ಯಾಸ್‌ ಪೈಪ್‌ಲೈನ್‌ಗೆ ಹಾನಿಯಾದ ಹಿನ್ನೆಲೆಯಲ್ಲಿ ಮನೆಯೊಳಗೆ ಗ್ಯಾಸ್‌ ಲೀಕ್‌ ಆಗಿ ಸಿಲಿಂಡರ್‌ ಸ್ಫೋಟ ಆಗಿದೆ.

ಗೇಲ್‌ ಗ್ಯಾಸ್‌ ಕಂಪನಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಲಾಗಿದೆ. ಈ ಭಾಗದಲ್ಲಿ ಗೇಲ್‌ ಪೈಪ್‌ ಲೈನ್‌ ಹಾದು ಹೋಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಎಲ್ಲೂ ಹಾಕಿಲ್ಲ. ಗೇಲ್ ಗ್ಯಾಸ್ ಪೈಪ್ ಹಾದು ಹೋಗಿದೆ ಎಂದು ಬೋರ್ಡ್ ಸಹ ಅಳವಡಿಸಿಲ್ಲ.. ಕೆಲಸ ಮಾಡುವಾಗಲು ಸಹ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂದು ಆಪಾದಿಸಲಾಗಿದೆ.

ತಂದೆಯಿಂದಲೇ ಮಗಳ ಕೊಲೆ; ಮದುವೆಯಾದರೂ ತವರು ಮನೆಯಲ್ಲಿದ್ದು ಕಿರುಕುಳ ಕೊಡುತ್ತಿದ್ದಳೇ?

ಬೆಂಗಳೂರು: ನಗರದ ಕೊಡಿಗೆಹಳ್ಳಿಯ ಧನಲಕ್ಷ್ಮಿ ಲೇಔಟ್‌ನಲ್ಲಿ ತಂದೆಯೇ ಮಗಳನ್ನು ಹೊಡೆದು ಕೊಂದಿದ್ದಾನೆ. ರಮೇಶ್‌ (60) ಎಂಬಾತ ತನ್ನ ಮಗಳಾದ ಆಶಾ (32)ಳನ್ನು ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಮಗಳಿಗೆ ಮದುವೆಯಾಗಿದ್ದರೂ ತವರಲ್ಲೇ ಬಂದು ಇದ್ದಳು. ಈ ವೇಳೆ ತಂದೆಯ ಜತೆ ಆಕೆಗೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.

ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಮೇಶ್‌ ಎಂಬವರ ಮಗಳಾದ ಆಶಾಳಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಅದರೆ, ಗಂಡನಿಂದ ದೂರವಾಗಿದ್ದ ಆಕೆ ತವರು ಮನೆಯಲ್ಲೇ ಬಂದು ಉಳಿದುಕೊಂಡಿದ್ದಳು.

ಈ ನಡುವೆ, ಆಕೆ ತಂದೆ ಮನೆಯಲ್ಲೇ ಕಾರುಬಾರು ಮಾಡಲು ಶುರು ಮಾಡಿದ್ದಳು. ಮನೆಯವರ ಮೇಲೆ ದಬ್ಬಾಳಿಕೆ ಮಾಡುತ್ತಾ ತಂದೆ, ತಾಯಿ, ತಂಗಿಗೆ ಕುರುಕುಳ ನೀಡುತ್ತಿದ್ದಳೆಂದು ಹೇಳಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿ ಬುಧವಾರ ರಾತ್ರಿ ಮನೆಯಲ್ಲಿ ಜಗಳವಾಗಿದೆ. ಹಿಂದಿನ ಸಿಟ್ಟೆಲ್ಲ ಇದ್ದಿದ್ದರಿಂದ ತಂದೆ ರಮೇಶ್‌ ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ದೊಣ್ಣೆಯ ಹೊಡೆತಕ್ಕೆ ಆಶಾ ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾಳೆ.

ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ತಂದೆ ರಮೇಶ್‌ನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : Murder Case: ಮಾವನನ್ನೇ ಗುಂಡಿಕ್ಕಿ ಕೊಂದ ಸೊಸೆ; ಕೌಟುಂಬಿಕ ಕಲಹ ಕಾರಣವೇ?

Exit mobile version