Site icon Vistara News

ನಿಗೂಢವಾಗಿ ನಾಪತ್ತೆಯಾಗಿದ್ದ ಬದಿಯಡ್ಕದ ದಂತವೈದ್ಯರ ಶವ ಪತ್ತೆ

doctor death

ಉಡುಪಿ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬದಿಯಡ್ಕದ ದಂತ ವೈದ್ಯ ಡಾ. ಕೃಷ್ಣಮೂರ್ತಿ ಅವರ ಮೃತ ದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

ಕುಂದಾಪುರ ಬಳಿಯ ಹಟ್ಟಿಯಂಗಡಿ ಗ್ರಾಮದ ಅಜ್ಜಿಮನೆಯಲ್ಲಿರುವ ರೈಲ್ವೆ ಹಳಿಯಲ್ಲಿ ಶವ ಗುರುವಾರ ಪತ್ತೆಯಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕ ನಿವಾಸಿಯಾಗಿದ್ದ ಡಾ. ಕೃಷ್ಣಮೂರ್ತಿ, ನವೆಂಬರ್ 8ರಂದು ನಾಪತ್ತೆಯಾಗಿರುವ ಕುರಿತು ಬದಿಯಡ್ಕದಲ್ಲಿ ದೂರು ದಾಖಲಾಗಿತ್ತು. ಬದಿಯಡ್ಕದಲ್ಲೇ ಬೈಕ್, ಮೊಬೈಲ್ ಬಿಟ್ಟು ಅವರು ನಾಪತ್ತೆಯಾಗಿದ್ದರು.

ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣದಂತೆ ಕಂಡು ಬಂದಿದ್ದರೂ ಅಸಹಜ ಸಾವು ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ಕಾರಣವಿದೆಯೇ ಎಂಬ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈದ್ಯರು ಜಮೀನಿನ ತಕರಾರಿನ ಹಿನ್ನೆಲೆಯಲ್ಲಿ ಕಿರುಕುಳ ಅನುಭವಿಸಿದ್ದ ಬಗ್ಗೆ ಮಾಹಿತಿಯಿದೆ. ಹಾಗೆಯೇ ಯುವತಿಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆಂದೂ ಅವರ ಮೇಲೆ ದೂರು ದಾಖಲಾಗಿತ್ತು. ಈ ಘಟನೆಯಿಂದ ಕುಗ್ಗಿ ಹೋಗಿ ಬದಿಯಡ್ಕದಿಂದ ಕಣ್ಮರೆಯಾಗಿದ್ದರು ಎಂದು ಊಹಿಸಲಾಗಿದೆ.

ಇದನ್ನೂ ಓದಿ | Crime News | ಅತ್ತೆಯ ಕೊಂದ ಅಳಿಯ, ನಕಲಿಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ, ತಲೆ ಇಲ್ಲದ ವ್ಯಕ್ತಿಯ ರುಂಡ ಪತ್ತೆ

Exit mobile version