Site icon Vistara News

Knife Attack: ಸುರತ್ಕಲ್‌ನಲ್ಲಿ ಯುವಕನಿಗೆ ಚೂರಿ ಇರಿತ

knife attack

ಮಂಗಳೂರು: ಮಂಗಳೂರಿನಲ್ಲಿ‌ ಯುವಕನೊಬ್ಬನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಮಂಗಳೂರು ಹೊರವಲಯದ ಸುರತ್ಕಲ್‌ (mangalore news) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಗಳೂರು ಹೊರವಲಯದ ಸುರತ್ಕಲ್‌ ಸಮೀಪದ ಕಳವಾರು ಎಂಬಲ್ಲಿ‌ ಘಟನೆ ನಡೆದಿದೆ. ಕಳವಾರು ಶಾಂತಿಗುಡ್ಡೆ ನಿವಾಸಿ ಸಫ್ವಾನ್‌ (23) ಚೂರಿ ಇರಿತಕ್ಕೆ (knife stabbing) ಒಳಗಾದ ಯುವಕ. ಸಂಜೆ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದೆ. ಘಟನೆಯಲ್ಲಿ ಸಫ್ವಾನ್‌ ಅವರ ಕೈ ಹಾಗೂ ಬೆನ್ನಿಗೆ ತಂಡ ಚೂರಿಯಿಂದ ಇರಿದಿದೆ.

ಗಾಯಗೊಂಡ ಸಫ್ವಾನ್‌ನನ್ನು ಮಂಗಳೂರಿನ ಖಾಸಗಿ‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಣಕಾಸಿನ ವ್ಯವಹಾರವೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಸ್ಥಳೀಯರು ಹಾಗೂ ಪರಿಚಿತರಿಂದಲೇ ಸಫ್ವಾನ್ ಮೇಲೆ‌ ಹಲ್ಲೆಯಾಗಿದೆ ಎನ್ನಲಾಗಿದೆ. ಸುರತ್ಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ‌ ಆರಂಭಿಸಿದ್ದಾರೆ.

ಉಗುಳಿದ್ದಕ್ಕೆ ಬಸ್‌ ಗ್ಲಾಸ್‌ ಒಡೆದು ಪೇದೆ ರಾದ್ಧಾಂತ

ಗದಗ: ಪೊಲೀಸ್‌ ಪೇದೆಯೊಬ್ಬ ಹೆಲ್ಮೆಟ್‌ನಿಂದ ಬಸ್ ಕಿಟಕಿಯ ಗ್ಲಾಸ್ ಒಡೆದು ಪುಂಡಾಟ ನಡೆಸಿದ್ದಾನೆ. ಗುಟ್ಕಾ ಉಗುಳಿದ ವ್ಯಕ್ತಿಗೆ ಹೊಡೆಯಲು ಹೋಗಿ ಬಸ್ ಕಿಟಕಿಯ ಗಾಜು ಒಡೆದು ಪುಡಿಪುಡಿ ಮಾಡಿದ್ದಾನೆ. ಬಸ್‌ನ ಕಿಟಕಿಯಿಂದ ಮೈಮೇಲೆ ಉಗುಳು ಬಿದ್ದಿದ್ದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಕಿಟಕಿಯ ಬಳಿ ಹಲ್ಲೆಗೆ ಯತ್ನಿಸಿದಾಗ ಬಸ್ ಕಿಟಕಿಯ ಗಾಜು ಪುಡಿಪುಡಿಯಾಗಿದೆ.

ಗದಗ ನಗರದ ದೋಭಿ ಘಾಟ್ ಬಳಿ ಘಟನೆ ನಡೆದಿದ್ದು, ಗದಗದ ಡಿಆರ್ ತುಕಡಿಯ ಶಂಭುನಾಥ ಎಂಬ ಪೇದೆ ರಾದ್ಧಾಂತ ನಡೆಸಿದವನು. ಬಳಿಕ ಉಗುಳಿದ ವ್ಯಕ್ತಿಗೆ ಪೇದೆ ಹಾಗೂ ಕಂಡಕ್ಟರ್, ಡ್ರೈವರ್ ಹಿಗ್ಗಾಮುಗ್ಗಾ ಬೈದಾಡಿದ್ದು, ಗ್ಲಾಸ್ ಒಡೆದಿದ್ದಕ್ಕೆ ದಂಡ ಕಟ್ಟಲು ಉಗುಳಿದ ವ್ಯಕ್ತಿಗೆ ಅವಾಜ್ ಹಾಕಿದ್ದಾರೆ. ಪ್ರಯಾಣಿಕ ಹಾಗೂ ಅವರ ಪತ್ನಿ ಕೈಕಾಲು ಬಿದ್ದು ತಪ್ಪೊಪ್ಪಿಕೊಂಡರೂ ಅಮಾನವೀಯವಾಗಿ ವರ್ತಿಸಿದ್ದಾರೆ.

ಇದನ್ನೂ ಓದಿ: Viral Video: ಹಿಂದು ಯುವಕನ ಜತೆ ತಿರುಗಾಡುತ್ತಿದ್ದ ಮುಸ್ಲಿಂ ಯುವತಿಯ ಬುರ್ಖಾ ಬಿಚ್ಚಿ ಹಲ್ಲೆ; ಯುವಕನಿಗೂ ಏಟು

Exit mobile version