Site icon Vistara News

ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋಗಿದ್ದ ಇಬ್ಬರ ಪೈಕಿ ಒಬ್ಬ ಯುವತಿ ಮೃತದೇಹ ಪತ್ತೆ

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಕ್ಷೇತ್ರದಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವಾಗ ಕೊಚ್ಚಿ ಹೋಗಿದ್ದ ಇಬ್ಬರು ಯುವತಿಯರ ಪೈಕಿ ಒಬ್ಬ ಯುವತಿಯ ಮೃತದೇಹ ಪತ್ತೆಯಾಗಿದೆ.

ಸೆಪ್ಟೆಂಬರ್‌ 4ರಂದು ಉಕ್ಕಡಗಾತ್ರಿಯಲ್ಲಿ ಸ್ನಾನಕ್ಕೆಂದು ನದಿಗೆ ಇಳಿದಿದ್ದಾಗ ಚೈತ್ರ(19), ಪುಷ್ಪ (17) ಎಂಬ ಇಬ್ಬರು ಸಹೋದರಿಯರು ಕೊಚ್ಚಿ ಹೋಗಿದ್ದರು. ಇಬ್ಬರ ಪೈಕಿ ಮಂಗಳವಾರ ಪುಷ್ಪ ಎಂಬ ಯುವತಿ ಮೃತದೇಹ ಪತ್ತೆಯಾಗಿದೆ. ಚೈತ್ರಾ ಮೃತದೇಹಕ್ಕೆ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆಲಾಗುತ್ತಿದೆ. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Rain news | ಧಾರಾಕಾರ ಮಳೆಗೆ ಕುಸಿದ ಗೋಡೆ, ಒಂಟಿ ಮಹಿಳೆ ಮಲಗಿದಲ್ಲೇ ಮೃತ್ಯು

Exit mobile version