Site icon Vistara News

Suicide Case : ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ

Dalit Woman Raped In Uttar Pradesh

Dalit Woman Raped, Body Chopped In Pieces In Uttar Pradesh

ದಾವಣಗೆರೆ: ಕೆಲವೊಮ್ಮೆ ಕೆಲವು ಆರೋಗ್ಯ ಸಮಸ್ಯೆಗಳು ಎಷ್ಟು ತೀವ್ರವಾಗಿರುತ್ತವೆ ಎಂದರೆ ಇದರಿಂದ ಮುಕ್ತಿ ಸಿಗಬೇಕು ಎಂದರೆ ಸಾವೇ ದಾರಿ (Suicide Case) ಅನಿಸಿಬಿಡುತ್ತದೆ. ಬೇರೆ ದಾರಿಗಳನ್ನು ಕಂಡುಕೊಳ್ಳುವ ವ್ಯವಧಾನ, ಹಣಕಾಸಿನ ವ್ಯವಸ್ಥೆಗಳೂ ಕೆಲವೊಮ್ಮೆ ಕೈಕೊಟ್ಟಿರುತ್ತವೆ. ದಾವಣಗೆರೆ ಜಿಲ್ಲೆಯ (Davanagere News) ಚನ್ನಗಿರಿ ತಾಲೂಕಿನ ಈ ಶಿಕ್ಷಕನಿಗೆ ಅದೇನಾಗಿತ್ತೋ ಗೊತ್ತಿಲ್ಲ. ಆದರೆ, ದೀರ್ಘ ಕಾಲದಿಂದ ಕಾಡುತ್ತಿದ್ದ ಹೊಟ್ಟೆ ನೋವು (Stomach Pain) ತಾಳಲಾರದೆ ಅವರು ಕೆರೆಗೆ ಹಾರಿ ಅತ್ಮಹತ್ಯೆ (Teacher suicide) ಮಾಡಿಕೊಂಡಿದ್ದಾರೆ.

ಚನ್ನಗಿರಿ ತಾಲೂಕಿನ ಹಿರೇಉಡ ಗ್ರಾಮದ ನಿವಾಸಿ ಶಿಕ್ಷಕರಾಗಿರುವ ಕೃಷ್ಣ ನಾಯ್ಕ್ (42) ಅವರು ಹೆದ್ದಾರಿ ಪಕ್ಕದಲ್ಲಿರುವ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ಮೈಸೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕೃಷ್ಣ ನಾಯ್ಕ್ ಅವರು ಅನೇಕ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ನಾಲ್ಕು ದಿನದ ಹಿಂದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಕೃಷ್ಣ ನಾಯ್ಕ್ ಅವರು ಬಳಿಕ ಮನೆಗೆ ಬಂದಿದ್ದರು.

ಗುರುವಾರ ಮುಂಜಾನೆ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಜನರಿಗೆ ಹೆದ್ದಾರಿ ಪಕ್ಕದ ಹೊಂಡದ ನೀರಿನಲ್ಲಿ ಕೃಷ್ಣನಾಯ್ಕ್ ಮೃತದೇಹ ಕಂಡಿತು. ಕೂಡಲೇ ಸಾರ್ವಜನಿಕರು ಚನ್ನಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆಗೆ ಗುದ್ದಿ ಸಾಯಿಸಿದ ಲಾರಿ

ಚಿತ್ರದುರ್ಗ: ಬಸ್‌ನಿಂದ ಕೆಳಗಿಳಿಯುವ ವೇಳೆ ಮಹಿಳೆಯೊಬ್ಬರಿಗೆ ಲಾರಿ ಡಿಕ್ಕಿಯಾಗಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿತ್ರದುರ್ಗದ ಹಿರಿಯೂರಿನ ಹೊರವಲಯದ ಎನ್‌ಎಚ್ 4 ರಸ್ತೆಯ ಮದ್ದೇರಹಳ್ಳ ಬಳಿ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಪಂಚರ್‌ ಆಗಿದ್ದ ಹಿನ್ನೆಲೆಯಲ್ಲಿ, ಎಲ್ಲರನ್ನು ಕೆಳಗಿಳಿಸಲಾಗುತ್ತಿತ್ತು. ಈ ವೇಳೆ ಮಲ್ಲಮ್ಮ ಎಂಬ ಮಹಿಳೆ ಕೆಳಗಿಳಿಯುತ್ತಿದ್ದಾಗ, ರಭಸವಾಗಿ ಬಂದ ಲಾರಿ ಗುದ್ದಿದೆ. ಲಾರಿ ಹೊಡೆದ ರಭಸಕ್ಕೆ ಮಲ್ಲಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಸವಾರನನ್ನು ಸಾಯಿಸಿ ಅಂಗಡಿಗೆ ನುಗ್ಗಿದ ಲಾರಿ

ಬೆಂಗಳೂರು: ನಗರದ ಬ್ಯಾಡರಹಳ್ಳಿ ಬಳಿ ಗೂಡ್ಸ್ ಲಾರಿ ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದು ಸಾಯಿಸಿದ್ದು, ಘಟನೆಯ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಇದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಲಾರಿ ಡಿವೈಡರ್ ಮೇಲೆ ಹತ್ತಿ ಅಂಗಡಿಯೊಳಗೆ ನುಗ್ಗಿತ್ತು. ಅಂಗಡಿಗೆ ಅಪ್ಪಳಿಸುವ ಮುನ್ನ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ರಭಸಕ್ಕೆ ಬೈಕ್ ಸವಾರ 10 ಅಡಿಯಷ್ಟು ದೂರ ಹಾರಿ ಬಿದ್ದಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಇಳಿದು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಲೆಮರೆಸಿಕೊಂಡಿರುವ ಚಾಲಕನಿಗಾಗಿ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ತಲಾಶೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Human Sacrifice: ತನ್ನ ತಾಯ್ತನಕ್ಕಾಗಿ 4 ವರ್ಷದ ಮಗನನ್ನು ನರಬಲಿ ಕೊಟ್ಟ ಮಲತಾಯಿ, ಮಾತೃಕುಲಕ್ಕೆ ಈಕೆ ಕಳಂಕ

Exit mobile version