Site icon Vistara News

ಪ್ರೇಯಸಿಯ ಬೆನ್ನಿಗೆ ಚೂರಿ ಹಾಕಿ ಪೊಲೀಸರಿಗೆ ಶರಣಾದ

ಧಾರವಾಡ ಕೊಲೆ

ಧಾರವಾಡ: ಇಲ್ಲಿನ ಸೋನಾಪುರದಲ್ಲಿ ರಾಮ ಸೇನಾ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಕದಂ ಎಂಬಾತ ತನ್ನ ಪ್ರೇಯಸಿ ಪದ್ಮಾ ಎಂಬುವಳ ಕೊಲೆಗೆ ಯತ್ನಿಸಿದ್ದಾನೆ. ಮನೆಯಲ್ಲಿದ್ದ ಪದ್ಮಾಳಿಗೆ ಚಾಕುವಿನಿಂದ ಇರಿದು ನಂತರ ಧಾರವಾಡ ಉಪನಗರ ಠಾಣೆಗೆ ಶರಣಾಗಿದ್ದಾನೆ.

ಪದ್ಮಾ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿಜಯ 7 ವರ್ಷಗಳಿಂದ ಆಕೆಯ ಜತೆ ಇದ್ದ. ಇಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು. ಈಗ ಅದು ಅತಿರೇಕಕ್ಕೆ ತಿರುಗಿ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಜಗಳ ತಾರಕಕ್ಕೇರಿದಾಗ ಮನೆಯಿಂದ ಹೊರಟು ಹೋಗಿದ್ದ ವಿಜಯ್‌, ನಂತರ ಬಂದವನೇ ಚಾಕು, ಮಚ್ಚು ಬಳಸಿ ಪದ್ಮಾಳ ಬೆನ್ನಿಗೆ ಇರಿದಿದ್ದಾನೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ | ಧಾರವಾಡ: ಕಾರು-ಬೈಕ್‌ ಮುಖಾಮುಖಿ ಡಿಕ್ಕಿ; ಮೂವರ ದಾರುಣ ಸಾವು

ಗಲಾಟೆ ವಿಡಿಯೋ ರೆಕಾರ್ಡ್‌ ಮಾಡಿದ್ದ ವಿಜಯ್‌

ಇನ್ನು ಇಬ್ಬರ ನಡುವಿನ ಮಾತಿನ ಚಕಮಕಿಯನ್ನು ವಿಜಯ್‌ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಜಗಳದ ವೇಳೆ ಚಾಕು ಹಿಡಿದುಕೊಂಡು ಆತ್ಮಹತ್ಯೆ ಬೆದರಿಕೆಯನ್ನು ಪದ್ಮಾ ಹಾಕಿದ್ದಳು. ಈ ದೃಶ್ಯ ಮೊಬೈಲ್‌ನಲ್ಲಿ ದಾಖಲಾಗಿದೆ.

ಇದನ್ನೂ ಓದಿ | ಧಾರವಾಡ ಭೀಕರ ಅಪಘಾತ ; ಓರ್ವ ಬಾಲಕಿ ದುರ್ಮರಣ

Exit mobile version