Site icon Vistara News

Double Murder: ಧಾರವಾಡದಲ್ಲಿ ಡಬಲ್ ಮರ್ಡರ್, ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ

double murder dharwad

ಧಾರವಾಡ: ಧಾರವಾಡದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಹತ್ಯೆ (Double Murder) ಮಾಡಲಾಗಿದೆ.

ಧಾರವಾಡ ನಗರದ ಕಮಲಾಪುರ ಹೊರವಲಯದಲ್ಲಿ ಘಟನೆ ನಡೆದಿದ್ದು, ಇಬ್ಬರನ್ನೂ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಹಮ್ಮದ್‌ ಕುಡಚಿ ಎಂಬವರು ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ.

ಕುಡಚಿ ಮನೆ ಎದುರು ಘಟನೆ ನಡೆದಿದೆ. ನಿನ್ನೆ ರಾತ್ರಿ ವೇಳೆ ಕುಡಚಿ ಮನೆ ಎದುರು ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪು ದಾಳಿ ಮಾಡಿದೆ. ಕುಡಚಿ ನಿವಾಸದ ಅನತಿ ದೂರದಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಅಟ್ಟಿಸಿಕೊಂಡು ಹೋಗಿ ಕೊಚ್ಚಿರುವ ಸಾಧ್ಯತೆಯಿದೆ. ದಾಳಿಗೀಡಾದ ವ್ಯಕ್ತಿ ಕುಡಚಿ ಮನೆಯಿಂದ ಓಡುತ್ತ ಹೋದಂತಿದ್ದು, ದಾರಿಯುದ್ದಕ್ಕೂ ರಕ್ತ ಬಿದ್ದಿದೆ. ಇನ್ನೊಬ್ಬನ ಹೆಸರು ತಿಳಿದು ಬಂದಿಲ್ಲ. ರಕ್ತಸಿಕ್ತ ಸ್ಥಿತಿಯಲ್ಲಿ ಎರಡೂ ಶವಗಳು ಪತ್ತೆಯಾಗಿವೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ

ಬೆಂಗಳೂರು: ರಾಜಧಾನಿಯ ಮಹದೇವಪುರದಲ್ಲಿ ತಡರಾತ್ರಿ ಯುವಕನೊಬ್ಬನನ್ನು ಹುಡುಗಿ ವಿಚಾರದಲ್ಲಿ ಜಗಳ ತೆಗೆದು ಹತ್ಯೆ ಮಾಡಲಾಗಿದೆ. ರೇಣುಕುಮಾರ್ (24) ಮೃತ ದುರ್ದೈವಿ.

ಏರಿಯಾದಲ್ಲಿ ನಿಂದು ಜಾಸ್ತಿ ಆಗಿದೆ ಅಂತ ಕ್ಷುಲ್ಲಕ ಕಾರಣಕ್ಕೆ ರೇಣುಕುಮಾರ್ ಜೊತೆ ಜಗಳ ಬೆಳೆಸಿದ ಆರೋಪಿ, ಗಲಾಟೆ ವೇಳೆ ರೇಣುಕುಮಾರ್‌ಗೆ ಚಾಕುವಿನಿಂದ ಇರಿದಿದ್ದಾನೆ. ಯುವತಿಯೊಬ್ಬಳ ಜತೆ ಗೆಳೆತನ ವಿಚಾರಕ್ಕೆ ಕೊಲೆ ನಡೆದಿರುವ ಅನುಮಾನವಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder case: ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿದ ಶಿಕ್ಷಕ; ಮನೆಗೆ ಬೀಗ ಹಾಕಿ ಪರಾರಿ

Exit mobile version