Site icon Vistara News

Suicide Case | ಮಹಿಳೆ ಹತ್ಯೆಗೈದಿದ್ದ ಆರೋಪಿ ಜೈಲಿನಲ್ಲೇ ನೇಣಿಗೆ ಶರಣು

Suicide

ಧಾರವಾಡ: ಜಿಲ್ಲಾಸ್ಪತ್ರೆ ಬಳಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ವಿಚಾರಣಾಧೀನ ಕೈದಿ, ಕಾರಾಗೃಹದಲ್ಲಿ (Suicide Case) ನೇಣಿಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಧಾರವಾಡದ ಕೇಂದ್ರ ಕಾರಾಗೃಹದಲ್ಲೇ ಕೈದಿ ಆನಂದ ದುಧನಿ ಎಂಬಾತ ನೇಣು ಹಾಕಿಕೊಂಡವನು. ಇದೇ ತಿಂಗಳ ಅಕ್ಟೋಬರ್‌ 14ರಂದು ಸವಿತಾ ಕಿತ್ತೂರ ಎಂಬಾಕೆಯನ್ನು ಧಾರವಾಡದ ಸಿವಿಲ್ ಆಸ್ಪತ್ರೆ ಬಳಿ ಬರ್ಬರವಾಗಿ ಹತ್ಯೆಮಾಡಿದ್ದ.

ಇದಾದ ಮೇಲೆ ಆರೋಪಿ ಆನಂದನನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಆನಂದ, ಜೈಲಿನಲ್ಲೇ ಬೆಡ್‌ಶೀಟ್ ಹರಿದು ಅದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಾಗೃಹಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ | ಮೂವರು ರೈತರ ಸಾವು | ಟ್ರ್ಯಾಕ್ಟರ್ ಉರುಳಿ ಮೃತ್ಯು, ವಿದ್ಯುತ್‌ ಸ್ಪರ್ಶಕ್ಕೆ ಬಲಿ, ಸಾಲದ ಶೂಲದಿಂದ ಆತ್ಮಹತ್ಯೆ

Exit mobile version