Site icon Vistara News

ಡಿಕೆ ಶಿವಕುಮಾರ್ ಅವರೇ ಮೊಟ್ಟೆ ಹೊಡೆಸಿರುವ ಸಾಧ್ಯತೆ ಇದೆ ಎಂದ ನಳಿನ್‌ ಕುಮಾರ್‌ ಕಟೀಲ್‌!‌

state bjp president nalin kumar kateel clarifies about silent sunil issue

ಬೆಂಗಳೂರು: ʻʻಸಿದ್ದರಾಮಯ್ಯ ಮಾಡಿರುವ ಹಿಂದೂ ಧರ್ಮದ ಅವಹೇಳನ ಮತ್ತು ಸಾವರ್ಕರ್ ಗೆ ಮಾಡಿರುವ ಅವಮಾನಕ್ಕೆ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗುತ್ತಿದೆʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ʻʻಸಿದ್ದರಾಮಯ್ಯ ಅವರ ಹಿಂದು ವಿರೋಧಿ ನೀತಿಯನ್ನು ಕಾಂಗ್ರೆಸ್‌ನಲ್ಲೇ ಇರುವ ಕೆಲವರು ಸಹಿಸುತ್ತಿಲ್ಲ. ಹೀಗಾಗಿಯೇ ಹಲವು ಹಿಂದುಗಳು ಪಕ್ಷ ಬಿಡುತ್ತಿದ್ದಾರೆ. ಕೊಡಗಿನಲ್ಲಿ ಮೊಟ್ಟೆ ಎಸೆದ ಸಂಪತ್‌ ಕೂಡಾ ಇದೇ ರೀತಿಯ ನೋವಿನಲ್ಲಿದ್ದವನಾಗಿರಬಹುದುʼʼ ಎಂದಿದ್ದಾರೆ ಕಟೀಲ್‌. ಇದರ ಪರಿಣಾಮವೇ ಕಾಂಗ್ರೆಸ್ ಕಾರ್ಯಕರ್ತ ನಾನೇ ಮೊಟ್ಟೆ ಹೊಡೆದಿದ್ದು ಅಂತಾ ಹೇಳಿಕೊಂಡಿದ್ದು ಎಂದಿದ್ದಾರೆ ನಳಿನ್‌ ಕುಮಾರ್‌.

ʻʻಈಗ ಕಾಂಗ್ರೆಸ್‌ ಕಾರ್ಯಕರ್ತನೇ ಮೊಟ್ಟೆ ಎಸೆದಿದ್ದು ಎಂದು ಒಪ್ಪಿಕೊಂಡಿದ್ದಾನೆ. ಹಾಗಿದ್ದರೆ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧವೇ ಪ್ರತಿಭಟನೆ ಮಾಡ್ತಾರಾ, ಕಾಂಗ್ರೆಸ್ ತೋಡೋ ಆಂದೋಲನ ಮಾಡ್ತಾರಾ ನೋಡಬೇಕು,ʼʼ ಎಂದಿದ್ದಾರೆ ಅವರು. ಇದೆಲ್ಲದರ ಜತೆಗೆ ಕೊನೆಗೊಂದು ಆಡಿದ ಮಾತು ಇನ್ನೂ ಇಂಟರೆಸ್ಟಿಂಗ್‌ ಆಗಿದೆ.

ʻʻನನಗೆ ಅನ್ನಿಸುತ್ತದೆ ಎಲ್ಲಾದರೂ ಡಿ.ಕೆ. ಶಿವಕುಮಾರ್ ಹಿಂದಿನಿಂದ ಮೊಟ್ಟೆ ಹೊಡೆಸಿದ್ದಾರಾ ಅನ್ನೋದು ಕೂಡಾ ತನಿಖೆಯಾಗಬೇಕುʼʼ- ಇದು ನಳಿನ್‌ ಕುಮಾರ್‌ ಮಾತು!

ಇದನ್ನೂ ಓದಿ| ಮೊಟ್ಟೆ ಎಸೆದ ಸಂಪತ್‌ ಕೈ ಕಾರ್ಯಕರ್ತ ಅಲ್ಲ, ಬಿಜೆಪಿ ಬೆಂಬಲಿಗ: ಗಣವೇಷ, ಚಿತ್ರ ದಾಖಲೆ ನೀಡಿದ ಕಾಂಗ್ರೆಸ್‌

Exit mobile version