Site icon Vistara News

Domestic violence | ಹೆಂಡತಿ ಬುದ್ಧಿವಾದ ಹೇಳಿದಳೆಂಬ ಸಿಟ್ಟಿನಲ್ಲಿ ಮಕ್ಕಳಿಗೆ ಸುತ್ತಿಗೆಯಿಂದ ಹೊಡೆದ ಕಟುಕ: ಇಬ್ಬರು ಗಂಭೀರ

Domestic violence

ಮೈಸೂರು: ವ್ಯಕ್ತಿಯೊಬ್ಬ ಕುಡಿತದ ಮತ್ತಿನಲ್ಲಿ ಮಕ್ಕಳಿಗೆ ಸುತ್ತಿಗೆಯಲ್ಲಿ ಹೊಡೆದಿದ್ದು (Domestic violence) ಇಬ್ಬರು ಮಕ್ಕಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೈಸೂರು ತಾಲೂಕು ಉದ್ಬೂರು ಗ್ರಾಮದ ನಿವಾಸಿಯಾಗಿರುವ ಸ್ವಾಮಿನಾಯಕ(45) ಎಂಬಾತನೇ ಸ್ವಂತ ಮಕ್ಕಳ ಮೇಲೆ ಹಲ್ಲೆ ನಡೆಸಿದ ತಂದೆ. ಕುಸುಮ(13) ಹಾಗೂ ಧನಶ್ರೀ (9) ಗಾಯಗೊಂಡ ಮಕ್ಕಳು.

ಸ್ವಾಮಿ ನಾಯಕ ಬೇಜವಾಬ್ದಾರಿಯುತ ಮನುಷ್ಯನಾಗಿದ್ದು, ಮನೆ, ಮಡದಿ, ಮಕ್ಕಳ ಬಗ್ಗೆ ಯಾವುದೇ ಕಾಳಜಿ ಹೊಂದಿರಲಿಲ್ಲ. ಕುಡಿತದ ದಾಸನಾಗಿದ್ದ ಈತ ರಾತ್ರಿ ಕಂಠಪೂರ್ತಿ ಕುಡಿದು ಬಂದು ಜಗಳ ಮಾಡುತ್ತಿದ್ದ. ಸ್ವಾಮಿ ನಾಯಕ ಮತ್ತು ಪತ್ನಿ ಗೀತಾ ಮಧ್ಯೆ ನಿತ್ಯ ಜಗಳ ನಡೆಯುತ್ತಿತ್ತು.

ಶುಕ್ರವಾರವೂ ಕುಡಿದು ಬಂದ ಸ್ವಾಮಿಗೆ, ಸಂಸಾರದ ಜವಾಬ್ದಾರಿ ಹೊರದ ವಿಚಾರದಲ್ಲಿ ಪತ್ನಿ ಗೀತಾ ಬುದ್ಧಿವಾದ ಹೇಳಿದ್ದರು. ಇದರಿಂದ ಸಂಯಮ ಕಳೆದುಕೊಂಡು ಸ್ವಾಮಿ ನಾಯಕ ಪತ್ನಿಯನ್ನು ಎದುರಿಸಲಾಗದೆ ಸುತ್ತಿಗೆಯಿಂದ ಮಕ್ಕಳಿಗೆ ಹಲ್ಲೆ ನಡೆಸಿದ. ಬಳಿಕ ಮನೆಯಿಂದ ಪರಾರಿಯಾಗಿದ್ದಾನೆ.

ಗಾಯಗೊಂಡ ಮಕ್ಕಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಬ್ಬರೂ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ | Murder revenge | ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ; ಸಂಬಂಧಿಕರಿಂದ ಆರೋಪಿಯ ಮಾವನ ಮನೆಗೆ ಬೆಂಕಿ

Exit mobile version