Site icon Vistara News

KSOU | ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ.ಶರಣಪ್ಪ ವಿ. ಹಲ್ಸೆ ನೇಮಕ

KSOU

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ(KSOU) ನೂತನ ಕುಲಪತಿಯಾಗಿ ಡಾ.ಶರಣಪ್ಪ ವಿ. ಹಲ್ಸೆ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಆದೇಶ ಹೊರಡಿಸಿದ್ದಾರೆ.

ಡಾ.ವಿದ್ಯಾಶಂಕರ್ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಡಾ.ಶರಣಪ್ಪ ವಿ. ಹಲ್ಸೆ ನಿಯೋಜನೆಗೊಂಡಿದ್ದಾರೆ. ಕೆಎಸ್​ಒಯು ಕುಲಪತಿಯಾಗಿದ್ದ ಡಾ.ವಿದ್ಯಾಶಂಕರ್ ಅವರನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಪತಿಯಾಗಿ ವರ್ಗಾವಣೆ ಮಾಡಲಾಗಿದೆ. ದಾವಣಗೆರೆ, ಗುಲ್ಬರ್ಗ ವಿವಿಯಲ್ಲಿ ಕುಲಸಚಿವರಾಗಿ ಕಾರ್ಯನಿರ್ವಹಿಸಿರುವ ಡಾ.ಶರಣಪ್ಪ ಹಲ್ಸೆ, ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ | TET Eaxm 2022 | ಆನ್‌ಲೈನ್‌ ತಂದ ಎಡವಟ್ಟು; ಟಿಇಟಿ ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳು

Exit mobile version