Site icon Vistara News

ದಾವಣಗೆರೆ ಠಾಣೆ ಮುಂದೆ ಕುಡಿದ ಮತ್ತಿನಲ್ಲಿ ಯುವತಿಯರ ಹೈಡ್ರಾಮಾ; ನಾಲ್ವರ ಬಂಧನ

ದಾವಣೆಗೆರೆ

ದಾವಣಗೆರೆ: ಮುಂಬಯಿ ಮೂಲದ ಇಬ್ಬರು ಯುವತಿಯರು, ಹಣಕಾಸಿನ ವಿಚಾರಕ್ಕಾಗಿ ಪರಸ್ಪರ ಜಗಳವಾಡಿ ಹೈಡ್ರಾಮಾ ಮಾಡಿರುವ ಘಟನೆ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆ ಮುಂದೆ ನಡೆದಿದ್ದು, ಈ ವೇಳೆ ಹಲ್ಲೆ ನಡೆಸಿದ್ದರಿಂದ ಕಾನ್‌ಸ್ಟೆಬಲ್‌ಗೆ ಗಾಯಗಳಾಗಿವೆ.

ಇವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಮುಂಬಯಿಯಿಂದ ಇಬ್ಬರು ಹುಡುಗಿಯರನ್ನು, ಶಿವಮೊಗ್ಗದ ಶಿಕಾರಿಪುರ ಮೂಲದ ವಕೀಲರಾದ ಮಂಜುನಾಥ, ಹರ್ಷ ಎಂಬುವರು ನಗರಕ್ಕೆ ಕರೆಸಿದ್ದರು. ಯುವತಿಯರಿಗೆ ಹಣ ಕೊಡದ ಹಿನ್ನೆಲೆಯಲ್ಲಿ ಕುಡಿದ ಅಮಲಿನಲ್ಲಿದ್ದ ಯುವತಿಯರು ಠಾಣೆ ಬಳಿ ಬಂದು ಸೋಮವಾರ ತಡರಾತ್ರಿ ಜಗಳವಾಡಿದ ಬಳಿಕ ಮಂಜುನಾಥ್‌ ಮತ್ತು ಹರ್ಷ ಜತೆ ಗಲಾಟೆ ಮಾಡಿದ್ದಾರೆ.

ಈ ವೇಳೆ ಜಗಳ ನಿಲ್ಲಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರಿಂದ ಒಬ್ಬ ಪೊಲೀಸ್ ಪೇದೆಗೆ ಗಾಯಗಳಾಗಿವೆ. ಪ್ರಕರಣ ಸಂಬಂಧ ಇಬ್ಬರು ಯುವತಿಯರು ಹಾಗೂ ಮಂಜುನಾಥ ಮತ್ತು ಹರ್ಷ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | Attempted suicide: ಕಳ್ಳತನ ಪ್ರಕರಣ; ವಿಚಾರಣೆಗೆ ಕರೆದಿದ್ದಕ್ಕೆ ವಿಷ ಸೇವಿಸಿ ಪೊಲೀಸರಿಗೆ ಆತ್ಮಹತ್ಯೆ ಬೆದರಿಕೆ

Exit mobile version