Site icon Vistara News

ಜಲಾಶಯದಲ್ಲಿ ಮುಳುಗಿ ತಂದೆ ಮಗ ಸಾವು

father son death

ರಾಯಚೂರು: ರಾಯಚೂರು ಜಿಲ್ಲೆಯ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಂದೆ ಮಗ ಸಾವನ್ನಪ್ಪಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ಪಲಗಲದಿನ್ನಿ ಗ್ರಾಮದ ಬಳಿ ನಿನ್ನೆ ಸಾಯಂಕಾಲ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಂದೆ ರಮೇಶ್(37) ಮತ್ತು ಮಗು ಲಕ್ಕಪ್ಪ (4) ಮೃತ ದುರ್ದೈವಿಗಳು.

ಕುಟುಂಬ ಸಮೇತ ಮೂವರು ಜಲಾಶಯಕ್ಕೆ ಹೋಗಿದ್ದರು. ಈ ವೇಳೆ ಪತ್ನಿ ನದಿ ದಡದಲ್ಲಿದ್ದರೆ, ಮಗ ದಡದ ಸಮೀಪ ನೀರಿನಲ್ಲಿ ಆಟವಾಡುತ್ತಿದ್ದ. ತಂದೆ ರಮೇಶ ತೆಪ್ಪದ‌ ಮೂಲಕ ಮೀನು ಹಿಡಿಯುತ್ತಿದ್ದರು. ಮಗ ಇದ್ದಕ್ಕಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಗಲಾರಂಭಿಸಿದಾಗ ಮಗು ಕಾಪಾಡಲು ಹೋಗಿ ತಂದೆಯೂ ನೀರುಪಾಲಾಗಿದ್ದಾರೆ. ಮುದಗಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

Exit mobile version