Site icon Vistara News

Fishermen missing | ಅಲೆಗಳ ಹೊಡೆತಕ್ಕೆ ಮುಳುಗಿದ ದೋಣಿ; ಮೀನುಗಾರಿಕೆಗೆ ಹೋದವರಲ್ಲಿ ಒಬ್ಬ ನಾಪತ್ತೆ

fishering

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಕ್ಕಿ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಮೀನುಗಾರ ನಾಪತ್ತೆಯಾಗಿದ್ದು, ಇಬ್ಬರು ಮೀನುಗಾರರನ್ನು (Fishermen missing) ರಕ್ಷಣೆ ಮಾಡಲಾಗಿದೆ.

ಪ್ರಾಣಾಪಾಯದಿಂದ ಪಾರಾದ ಮೀನುಗಾರರು

ಜಾಲಿ ಗ್ರಾಮದ ಯುವಕ ನಾಗರಾಜ ಮೊಗೇರ ಎಂಬ ಮೀನುಗಾರ ನಾಪತ್ತೆಯಾಗಿದ್ದಾರೆ. ದೋಣಿಯಲ್ಲಿದ್ದ ವಿಕ್ಟರ್ ರಾಜ ಹಾಗೂ ಪುರುಷೋತ್ತಮ ಮೊಗೇರ ಎಂಬುವವರನ್ನು ರಕ್ಷಣೆ ಮಾಡಲಾಗಿದೆ. ಈ ಮೂವರು ಮೀನುಗಾರಿಕೆಗೆ ತೆರಳಿ ವಾಪಸಾಗುತ್ತಿದ್ದ ವೇಳೆ ಅಲೆಯ ಹೊಡೆತಕ್ಕೆ ದೋಣಿ ಮುಳುಗಡೆಯಾಗಿದೆ.

ನಾಗರಾಜ ಮೊಗೇರ ನಾಪತ್ತೆಯಾದ ಮೀನುಗಾರ

ಪರಿಣಾಮ ಒಬ್ಬ ಮೀನುಗಾರ ನಾಪತ್ತೆಯಾಗಿದ್ದರೆ, ಮತ್ತಿಬ್ಬರನ್ನು ರಕ್ಷಣೆ ಮಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಮೀನುಗಾರರಿಂದ ನಾಪತ್ತೆಯಾದ ಮೀನುಗಾರನ ಹುಡುಕಾಟ ಮುಂದುವರಿದಿದೆ.

ಇದನ್ನೂ ಓದಿ | Heavy Rain | ಚಾಮರಾಜನಗರದ ಮಳೆ ನೀರಿಗೆ ಕೊಚ್ಚಿ ಹೋದ ತೆಂಗಿನಕಾಯಿ; ಆರಕ್ಷಕರಿಗೆ ಜಲ ದಿಗ್ಭಂಧನ

Exit mobile version