Site icon Vistara News

Fraud Case | ಮೈಮೇಲೆ ದೇವರು ಬಂದಂತೆ ವರ್ತಿಸಿ ಜನರಿಂದ ಹಣ, ಚಿನ್ನ ಪಡೆದು ವಂಚನೆ

Fraud Case

ಮಂಡ್ಯ: ಇಲ್ಲಿನ ಮಳವಳ್ಳಿ ಪಟ್ಟಣದಲ್ಲಿ ಶಿವಲಿಂಗಮ್ಮ ಎಂಬಾಕೆ ಮೈಮೇಲೆ ದೇವರು ಬರುವುದಾಗಿ ಜನರನ್ನು ನಂಬಿಸಿ ಚಿನ್ನಾಭರಣ, ಹಣ ಪಡೆದು ವಂಚಿಸಿರುವ (Fraud Case) ಘಟನೆ ನಡೆದಿದೆ.

ಕಾಂತಾರ ಚಿತ್ರದಲ್ಲಿ ಮೈಮೇಲೆ ಪಂಜುರ್ಲಿ ದೈವ ಬಂದಾಗ ನಾಯಕ ರಿಷಬ್‌ ಶೆಟ್ಟಿ ಕೂಗುವಂತೆಯೇ ʻಹೋʼ ಎಂದು ಜೋರಾಗಿ ಕೂಗಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ತನ್ನ ಮೈಮೇಲೆ ದೇವರು ಬಂದಿದೆ ಎಂದು ನಂಬಿಸಿ, ಬಂದ ಭಕ್ತರನ್ನು ಗುರಿಯಾಗಿಸಿಕೊಂಡು ಈ ರೀತಿ ಕೂಗಿ ಜನರ ಬಳಿ ಚಿನ್ನಾಭರಣ, ಹಣ ಪಡೆದು ವಂಚಿಸಿರುವುದಾಗಿ ದೂರು ದಾಖಲಾಗಿದೆ.

ಕಷ್ಟ ಹೇಳಿಕೊಂಡು ಬಂದ ಭಕ್ತರ ಬಳಿ ಹಣ ಮತ್ತು ಚಿನ್ನ ಪಡೆದು ವಂಚನೆ ಮಾಡುತ್ತಿದ್ದಾರೆಂದು ಆರೋಪಿಸಿ, ಮಳವಳ್ಳಿ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Video Viral | ಪಲ್ಲಕ್ಕಿ ಉತ್ಸವದಲ್ಲಿ ದೇವರು ಮೈಮೇಲೆ ಬಂದಂತೆ ಆಡಿದ ಮಹಿಳೆ; ವಿಡಿಯೊ ವೈರಲ್‌

Exit mobile version