Site icon Vistara News

Gadag Accident: ಗದಗದಲ್ಲಿ ಆಟೋ-ಖಾಸಗಿ ಬಸ್ ಡಿಕ್ಕಿಯಾಗಿ ಮೂವರ ಸಾವು, 8 ಮಂದಿಗೆ ಗಾಯ

Three killed on spot as auto-private bus collides head-on

#image_title

ಗದಗ: ಆಟೋ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟು, 8 ಮಂದಿ ಗಾಯಗೊಂಡಿರುವ ಘಟನೆ (Gadag Accident) ಗದಗದ ರೋಣ ರಸ್ತೆಯ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿ ಭಾನುವಾರ ನಡೆದಿದೆ.

ಅಪಘಾತದಲ್ಲಿ ಆಟೋದಲ್ಲಿದ್ದ ನರಸಾಪುರ ಆಶ್ರಯ‌ಕಾಲೋನಿ ನಿವಾಸಿ ಸೈಯದ್ ಹುಸೇನಸಾಬ ಸೂಡಿ(೨೦), ನರಸಾಪುರದ ಪ್ರದೀಪ ದೇವಪ್ಪ ಪೂಜಾರ (೪೦), ಬೆಟಗೇರಿಯ ನಿಖಿಲ ಮಂಜುನಾಥ ಮುಳಗುಂದ (೨೦) ಎಂಬುವವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗದಗದ ಬೆಟಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಬಸ್ ಹಾಗೂ ಆಟೋ ಪಲ್ಟಿಯಾಗಿ ನಜ್ಜುಗುಜ್ಜಾಗಿವೆ.

ದಾವಣಗೆರೆಯಲ್ಲಿ ಚಾಕು ಇರಿದು ಯುವಕನ ಕೊಲೆ

ದಾವಣಗೆರೆ: ದೇವಸ್ಥಾನದ ಜಮೀನು ವಿಚಾರವಾಗಿ ನಡೆದ ಜಗಳದಲ್ಲಿ ನಡು ರಸ್ತೆಯಲ್ಲಿಯೇ ಚಾಕು ಇರಿದು ಯುವಕನ ಕೊಲೆ ಮಾಡಿರುವ ಘಟನೆ ನಗರದ ಗಾಂಧಿನಗರ 6ನೇ ಕ್ರಾಸ್‌ನಲ್ಲಿ ನಡೆದಿದೆ. ಕಿತ್ತೂರು ಗ್ರಾಮದ ನಿವಾಸಿ ಮೈಲಾರಿ (28) ಕೊಲೆಯಾದ ಯುವಕ.

ಇದನ್ನೂ ಓದಿ | Suicide Case: ಹೈನುಗಾರಿಕೆಯಲ್ಲಿ ನಷ್ಟ; ಬೇಸತ್ತ ಯುವಕ ಆತ್ಮಹತ್ಯೆಗೆ ಶರಣು

ಮಲ್ಲೇಶ್, ಮೂರ್ತಪ್ಪ ಹಾಗೂ ರಕ್ಷಿತ ಸೇರಿ ಏಳು ಆರೋಪಿಗಳ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಗಾಂಧಿ ನಗರ ಪೊಲೀಸ್ ಠಾಣೆಯ ಕೂಗಳತೆಯಲ್ಲಿಯೇ ಘಟನೆ ನಡೆದಿದೆ. ಕಿತ್ತೂರು ಗ್ರಾಮದಲ್ಲಿ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಆರು ಎಕರೆ ಗೋಮಾಳ ಜಮೀನು ವಿಚಾರವಾಗಿ ಜಗಳ ನಡೆದಿದೆ. ಜಮೀನಿನಲ್ಲಿ ನಮ್ಮ ಪಾಲು ಇದೇ ಎಂದು ಆರೋಪಿಗಳು ಕಳೆದ ಕೆಲ ದಿನಗಳಿಂದ ಜಗಳ ಶುರುಮಾಡಿದ್ದರು ಎನ್ನಲಾಗಿದೆ. ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version