Site icon Vistara News

knife attack | ದುಷ್ಕರ್ಮಿಗಳಿಂದ ಮೂವರಿಗೆ ಚಾಕು ಇರಿತ

crime news

ಗದಗ: ಮನೆ ಮುಂದೆ ನಿಂತಿದ್ದ ಮೂವರು ವ್ಯಕ್ತಿಗಳಿಗೆ ಚಾಕುವಿನಿಂದ ಮನಸೋ ಇಚ್ಛೆ ಇರಿಯಲಾಗಿದೆ.

ಗದಗ ನಗರದ‌ ಕಿಲ್ಲಾ ಓಣಿಯಲ್ಲಿ ತಡರಾತ್ರಿ ನಡೆದ ಘಟನೆ ಬೆಳಕಿಗೆ ಬಂದಿದೆ. ಮನೆ ಮುಂದೆ ನಿಂತಿದ್ದ ಗೋಪಾಲ ಖೋಡೆ, ಮಾಧು ಬದಿ ಹಾಗೂ ವಸಂತ‌ ಬಾಕಳೆ ಎಂಬವರನ್ನು ಬೈಕ್ ಮೇಲೆ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಮನಸೋ ಇಚ್ಛೆ ಇರಿದಿದ್ದಾರೆ. ಗಾಯಾಳುಗಳಿಗೆ ಜೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Crime News | ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ, ಯುವತಿ ತಂದೆಗೆ ಚಾಕು ಇರಿತ

Exit mobile version