Site icon Vistara News

Harapanahalli | ಈಜಾಡಲು ಹೋಗಿ ಕೆರೆ ನೀರಿನಲ್ಲಿ‌ ಮುಳುಗಿ ಇಬ್ಬರು ಯುವಕರು ಸಾವು

neerupalu

ವಿಜಯನಗರ: ಭಾನುವಾರದ ರಜೆ ವೇಳೆ ಖುಷಿಯಿಂದ ಕೆರೆಯಲ್ಲಿ ಈಜಾಡಲೆಂದು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ

ವಿಜಯ ನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ‌ ತೆಲಗಿ ಗ್ರಾಮದ ಕೆರೆಯಲ್ಲಿ ಅವಘಡ ಸಂಭವಿಸಿದೆ. ಇದೇ ಪ್ರದೇಶದ ಅಮರ್ (19), ಚಂದ್ರು (19) ಸಾವನ್ನಪ್ಪಿದ ಯುವಕರು.

ರಜೆ ಇದ್ದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಾಡಲು ಹೋಗಿದ್ದ ಯುವಕರು ನೀರಿ ಖುಷಿಪಡುತ್ತಿರುವುದನ್ನು ಅಲ್ಲಿದ್ದ ಜನರೆಲ್ಲ ನೋಡಿದ್ದಾರೆ. ಆದರೆ, ಸ್ವಲ್ಪ ಹೊತ್ತಿನಲ್ಲೇ ಅವರು ನಾಪತ್ತೆಯಾಗಿದ್ದು ಕಂಡು ಕೂಡಲೇ ಎಲ್ಲರನ್ನೂ ಕರೆಸಿ ಹುಡುಕಾಡಲು ಶುರು ಮಾಡಿದರು.

ಈ ಇಬ್ಬರು ಯುವಕರು ಕೆರೆಯ ಕೆಸರಿನಲ್ಲಿ ಕಾಲು ಸಿಕ್ಕಿ ಹಾಕಿಕೊಂಡು ಮೇಲೆ ಬರಲಾಗದೆ ಒದ್ದಾಡಿ ಪ್ರಾಣ ಕಳೆದುಕೊಂಡಿರುವುದು ಬಳಿಕ ಗೊತ್ತಾಯಿತು. ಕೊನೆಗೆ ಮುಳುಗು ತಜ್ಞರನ್ನೇ ಕರೆಸಿ ಮೃತದೇಹಗಳನ್ನು ಹೊರಗೆ ತೆಗೆಯಬೇಕಾಯಿತು.

ಇಬ್ಬರ ಮೃತದೇಹವನ್ನು ತೆಲಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ| Death News | ಕೆರೆಯಲ್ಲಿ ಮೀನು ಹಿಡಿಯಲು ಹೋದ ಶಿವ, ಶಂಕರ್‌ ನೀರುಪಾಲು; ಚಿರಂಜೀವಿ ಪಾರು

Exit mobile version