Site icon Vistara News

Assault Case : ದಾಯಾದಿಗಳ ಆಸ್ತಿ ಕಲಹ; ಕೊರಳ ಪಟ್ಟಿಗೆ ಕೈ ಹಾಕಿದ ಪಿಎಸ್‌ಐಗೆ ಬೆವರಿಳಿಸಿದ!

Assault Case in Hasana

ಹಾಸನ: ವ್ಯಕ್ತಿಯೊಬ್ಬರ ಮನೆ ಬಳಿ ಬಂದ ಪಿಎಸ್‌ಐ ಭರತ್ ರೆಡ್ಡಿ ಕೊರಳ ಪಟ್ಟಿಗೆ ಕೈ ಹಾಕಿ ಬಾರೋ ಠಾಣೆಗೆ ಎಂದು ಎಳೆದಾಡಿ ದೌರ್ಜನ್ಯ (Assault Case) ನಡೆಸಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರದಲ್ಲಿ ಘಟನೆ ನಡೆದಿದೆ. ರಾಘವೇಂದ್ರ ಎಂಬುವವರ ಮೇಲೆ ಪಿಎಸ್‌ಐ ಭರತ್ ರೆಡ್ಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಿಜೆಪಿ ಮುಖಂಡ ಶಿವನಂಜೇಗೌಡ ಹಾಗೂ ರಾಘವೇಂದ್ರ ನಡುವೆ 20 ವರ್ಷಗಳಿಂದ ಆಸ್ತಿ ವಿವಾದ ನಡೆಯುತ್ತಿದೆ. ದಾಯಾದಿಗಳ ನಡುವೆ ಆಸ್ತಿ ವಿವಾದಕ್ಕೆ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ರಾಘವೇಂದ್ರ ವಿರುದ್ಧ ಶಿವನಂಜೇಗೌಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಶಿವನಂಜೇಗೌಡ ದೂರಿನ ಮೇರೆಗೆ ರಾಘವೇಂದ್ರರ ಮನೆ ಬಳಿ ಬಂದ ಪಿಎಸ್‌ಐ ಭರತ್‌ ರೆಡ್ಡಿ ದೌರ್ಜನ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಭರತ್‌ ರೆಡ್ಡಿ ಮನೆ ಬಳಿ ಬಂದಾಗ ರಾಘವೇಂದ್ರ ಅವರು ತಿಂಡಿ ತಿನ್ನುತ್ತಿದ್ದೇನೆ ಮುಗಿಸಿ ನೇರವಾಗಿ ಠಾಣೆಗೆ ಬರುತ್ತೇನೆ ಎಂದಿದ್ದಾರೆ. ಇದರಿಂದ ಸಿಟ್ಟಾದ ಪಿಎಸ್‌ಐ ಭರತ್‌ ರೆಡ್ಡಿ ರಾಘವೇಂದ್ರರ ಮನೆಯವರ ಮುಂದೆಯೇ ಕೊರಳ ಪಟ್ಟಿಗೆ ಕೈ ಹಾಕಿ ಬಾರೋ ಠಾಣೆಗೆ ಎಂದು ಎಳೆದಾಡಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವೇಳೆ ರಾಘವೇಂದ್ರ ಕುಟುಂಬಸ್ಥರು, ಅಕ್ಕ-ಪಕ್ಕದ ಮನೆಯವರು ಪಿಎಸ್‌ಐ ದೌರ್ಜನ್ಯವನ್ನು ಖಂಡಿಸಿದ್ದಾರೆ. ಸುಖಾಸುಮ್ಮನೆ ಹಲ್ಲೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Murder case : ಹಣ ದೋಚಲು ಸ್ನೇಹಿತನ ಹೆಣ ಬೀಳಿಸಿದ ಹಂತಕ

ದೇವಸ್ಥಾನದಲ್ಲಿ ಸೌಂಡ್ ಕಮ್ಮಿ ಮಾಡಿ ಎಂದಿದ್ದಕ್ಕೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಮಾರಣಾಂತಿಕ ಹಲ್ಲೆ

ಕೋಲಾರ: ಕ್ಷುಲ್ಲಕ ವಿಚಾರಕ್ಕೆ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ (Kotiganahalli Ramaiah) ಅವರ ಮೇಲೆ ಗಂಭೀರವಾಗಿ ಹಲ್ಲೆ (Assault Case) ನಡೆಸಲಾಗಿದೆ. ತಂದೆಯನ್ನು ರಕ್ಷಿಸಲು ಬಂದ ಮಗನಿಗೂ ಹೊಡೆದಿದ್ದಾರೆ. ಕೋಲಾರದ (Kolar news) ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿಯ ಮುನೇಶ್ವರ ದೇವಾಲಯ ಬಳಿ ಘಟನೆ ನಡೆದಿದೆ.

ಪಾಪರಾಜನಹಳ್ಳಿ ಗ್ರಾಮದ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ- ಸಂಜೆ ಧ್ವನಿವರ್ಧಕದ ಮೂಲಕ ಜೋರಾಗಿ ಮೈಕ್‌ ಹಾಕಲಾಗಿತ್ತು. ಇಂದು ಗುರುವಾರ ಬೆಳಗ್ಗೆಯೂ ಧ್ವನಿವರ್ಧಕದ ಸೌಂಡ್ ಹೆಚ್ಚು ಮಾಡಿದ್ದಾರೆ. ಹೀಗಾಗಿ ಕೋಟಿಗಾನಹಳ್ಳಿ ರಾಮಯ್ಯ ಸೌಂಡ್‌ ಕಡಿಮೆ ಮಾಡಿ, ಓದಲು ತೊಂದರೆ ಆಗುತ್ತೆ ಎಂದು ಹೇಳಿದ್ದಾರೆ.

ಹೀಗಾಗಿ ಕೋಟಿಗಾನಹಳ್ಳಿ ರಾಮಯ್ಯ ಬುಡ್ಡಿ ದೀಪದಲ್ಲಿ ಇರಬಾರದು ಎಂದು ಗಲಾಟೆ ಮಾಡಿ ಕಣ್ಣು ಹಾಗೂ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಗ್ರಾಮದ ಮಂಜುನಾಥ್, ಬೈರಪ್ಪ, ಸುಬ್ಬು ಸೇರಿದಂತೆ ಇತರರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆಗೆ ಒಳಗಾದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಮಗ ಮೇಘಾವರ್ಷ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ಮಾಡಿದ ಮಂಜುನಾಥ್ ಎಂಬಾತನನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Road Accident : ಬಸ್‌ ಗುದ್ದಿದ ರಭಸಕ್ಕೆ ಅಪ್ಪಚ್ಚಿಯಾದ ಓಮ್ನಿ ಕಾರು; ಮೂವರು ದಾರುಣ ಸಾವು

Group clash : ರಾಯಚೂರಲ್ಲಿ ಗುಂಪು ಘರ್ಷಣೆ; ರಾಡ್‌, ದೊಣ್ಣೆಯಿಂದ ಬಡಿದಾಟ

ರಾಯಚೂರು: ರಾಯಚೂರಲ್ಲಿ (Raichur News) ನ್ಯಾಯ ಪಂಚಾಯತಿ ವಿಚಾರಕ್ಕೆ ಗುಂಪು (Group clash) ಘರ್ಷಣೆಯಾಗಿದೆ. ರಾಯಚೂರು ಹೊರವಲಯದ ಅಸ್ಕಿಹಾಳ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಸಂಘರ್ಷದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. 3 ವರ್ಷಗಳಿಂದ ಎರಡೂ ತಂಡಗಳ ಯುವಕರ ಮಧ್ಯೆ ಕಿರಿಕ್ ನಡೆಯುತ್ತಿತ್ತು. ಇದೇ ವಿಚಾರಕ್ಕೆ ನ್ಯಾಯ ಪಂಚಾಯತ್ ಮಾಡಲು ನರಸಪ್ಪ ಎಂಬವರು ಮುಂದಾಗಿದ್ದರು. ನೀವು ನ್ಯಾಯ ಪಂಚಾಯತಿ ಮಾಡೋಷ್ಟು ದೊಡ್ಡವರು ಎಂದು ಶುರುವಾದ ಮಾತು, ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಸಂಘರ್ಷಕ್ಕೆ ಕಾರಣವಾಗಿದೆ.

ಘಟನೆಯಲ್ಲಿ ರೇಷ್ಮಾ, ನರಸಪ್ಪ, ಮನೋಹರ್, ಗಿರಿಜಾ ಸೇರಿ ನಾಲ್ವರಿಗೆ ಗಾಯವಾಗಿದೆ. ಸದ್ಯ ಗಾಯಾಳುಗಳಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ರಂಗಪ್ಪ ಸೇರಿದಂತೆ ಒಟ್ಟು 15 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version