Site icon Vistara News

JDS ticket : ಜೆಡಿಎಸ್‌ ಟಿಕೆಟ್‌ ಹಂಚಿಕೆ ಗೊಂದಲ, ಕುಮಾರಸ್ವಾಮಿ ಕಾರಿಗೆ ಕಾರ್ಯಕರ್ತರ ಮುತ್ತಿಗೆ

JDS

#image_title

ಹಾಸನ : ಹಾಸನದಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲ ಮುಂದುವರಿದಿದೆ. (JDS ticket) ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ನೀಡುವಂತೆ ಪಕ್ಷದ ಕಾರ್ಯಕರ್ತರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಕಾರಿಗೆ ಸೋಮವಾರ ರಾತ್ರಿ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಹಾಸನ ಜಿಲ್ಲೆ‌ಯ ಶ್ರವಣಬೆಳಗೊಳದಲ್ಲಿ ಕುಮಾರಸ್ವಾಮಿ ಅವರಿದ್ದ ಕಾರನ್ನು ಕಾರ್ಯಕರ್ತರು ತಡೆದರು. ಸ್ವರೂಪ್ ಪ್ರಕಾಶ್ ಭಾವಚಿತ್ರ ಹಿಡಿದು ಹೆಚ್ಡಿಕೆ ಮುಂದೆ ಬೇಡಿಕೆ ಇಡಲಾಯಿತು. ಶ್ರವಣಬೆಳಗೊಳ ಗ್ರಾಮದಲ್ಲಿ ಅನೇಕ ಸ್ನೇಹಿತರು ಮತ್ತು ಬೆಂಬಲಿಗರನ್ನು ಸ್ವರೂಪ್ ಹೊಂದಿದ್ದಾರೆ. ಇಂಜಿನಿಯರಿಂಗ್ ಪದವಿಯನ್ನು ಶ್ರವಣಬೆಳಗೊಳದಲ್ಲಿ ಮಾಡಿದ್ದಾರೆ. ವಿದ್ಯಾಭ್ಯಾಸದ ದಿನಗಳಿಂದಲೂ ಗ್ರಾಮದಲ್ಲಿ ಉತ್ತಮ ಒಡನಾಟ ಹೊಂದಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯನ್ನು ಹೆಚ್ಡಿಕೆ ಆಯೋಜಿಸಿದ್ದಾರೆ. ಸೋಮವಾರ ರಾತ್ರಿ ಶ್ರವಣಬೆಳಗೊಳ ಗ್ರಾಮಕ್ಕೆ ಹೆಚ್ಡಿಕೆ ಆಗಮಿಸಿದ ವೇಳೆಯಲ್ಲಿ ಘಟನೆ ನಡೆದಿದೆ. ಕಾರ್ಯಕರ್ತರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಡಿಕೆ ಮುನ್ನಡೆದರು. ವಡ್ಡರಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು.

Exit mobile version