Site icon Vistara News

ದಿನಾ ಹಲ್ಲೆ ನಡೆಸುತ್ತಿದ್ದ ಪತಿಯ ಜೀವ ತೆಗೆದ ಪತ್ನಿ

murder

ಹಾಸನ: ಪ್ರತಿದಿನ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದ ಪತಿಯನ್ನು ಒತ್ನಿಯೇ ಹೊಡೆದು ಕೊಂದು ಹೂತಿಟ್ಟ ಪ್ರಕರಣ ಅರಕಲಗೂಡಿನಿಂದ ವರದಿಯಾಗಿದೆ.

ಹಾಸನ‌ ಜಿಲ್ಲೆ ಅರಕಲಗೂಡು ತಾಲ್ಲೂಕಿನ ನೇರಳಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಲೀಲಾವತಿ ಎಂಬಾಕೆಯಿಂದ ಕೃತ್ಯ ನಡೆದಿದೆ. ಈಕೆಯ ಪತಿ ಕೃಷ್ಣೇಗೌಡ (50) ಪ್ರತಿದಿನ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದ. ಸೋಮವಾರ ರಾತ್ರಿ ಪತಿ ಗಲಾಟೆ ಮಾಡುವಾಗ ಪತ್ನಿ ರೊಚ್ಚಿಗೆದ್ದು ದೊಣ್ಣೆಯಿಂದ ಪತಿಗೆ ಚೆನ್ನಾಗಿ ಬಾರಿಸಿ ಕೊಂದುಹಾಕಿದ್ದಳು. ನಂತರ ಶವವನ್ನು ಮನೆಯ ಹಿಂಭಾಗ ಗುಂಡಿ ತೆಗೆದು ಹೂತಿದ್ದು, ತನ್ನ ಪಾಡಿಗೆ ತಾನು ಮನೆಯಲ್ಲಿದ್ದಳು.

ಮನೆಯಲ್ಲಿ ಲೀಲಾವತಿ ಒಬ್ಬಳೇ ಇರುವ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಕೃಷ್ಣೇಗೌಡ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜನರ ಅನುಮಾನದ ಮೇಲೆ ಪೊಲೀಸರು ಪತ್ನಿಯನ್ನು ಕರೆತಂದು ವಿಚಾರಣೆ ಮಾಡಿದಾಗ ಹತ್ಯೆ ಬಯಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದು ಮೃತದೇಹ ಹೊರ ತೆಗೆಸಲು ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಜೋಡಿ ಕೊಲೆ | ಹಾರೆಯಿಂದ ತಲೆಗೆ ಹೊಡೆದು ಪತ್ನಿ, ಮಗನ ಹತ್ಯೆ

Exit mobile version