Site icon Vistara News

Karnataka Election 2023: ರಾಜ್ಯಕ್ಕೆ ಮತ್ತೊಮ್ಮೆ ಕುಮಾರಸ್ವಾಮಿ; ನೇತ್ರಾಣಿ ದ್ವೀಪದ ಕಡಲಾಳದಲ್ಲಿ ಬ್ಯಾನರ್‌ ಪ್ರದರ್ಶನ

HD Kumaraswamy once again to CM Fan displays banner on netrani island beach Scuba Diving updates

ಕಾರವಾರ: ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ಮೂರು ದಿನವಷ್ಟೇ ಬಾಕಿ ಇದೆ. ಈ ವೇಳೆ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಸೇರಿದಂತೆ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇನ್ನು ಆಯಾ ಪಕ್ಷಗಳ ಅಭಿಮಾನಿಗಳು, ಕಾರ್ಯಕರ್ತರು ಸಹ ತಮ್ಮ ಪಕ್ಷದ ನಾಯಕರು ಗೆಲ್ಲಲಿ ಎಂದು ವಿಶೇಷ ಪೂಜೆ, ಸೇವೆ ಸೇರಿದಂತೆ ಭಿನ್ನ-ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ಅಭಿಮಾನಿಯೊಬ್ಬ ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ (Scuba diving) ನೀರಿನಲ್ಲಿ ಮುಳುಗಿ ಅವರ ಪರವಾಗಿ ಪ್ರಚಾರ ಮಾಡುವ ಮೂಲಕ ಅಭಿಮಾನವನ್ನು ಪ್ರದರ್ಶನ ಮಾಡಿದ್ದಾನೆ.

ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು. ಅವರಿಗೆ ಅಧಿಕಾರ ಸಿಗಬೇಕು ಎಂದು ಅಭಿಮಾನಿಯೊಬ್ಬ ಕಡಲಾಳದಲ್ಲಿ ಬ್ಯಾನರ್‌ ಹಿಡಿದು ಅಭಿಮಾನವನ್ನು ಪ್ರದರ್ಶನ ಮಾಡಿದ್ದಾನೆ.

ಇದನ್ನೂ ಓದಿ: Karnataka Election 2023: ಅಸೆಂಬ್ಲಿ ಎಲೆಕ್ಷನ್‌ ಎಫೆಕ್ಟ್‌; ಬೆಂಗಳೂರಲ್ಲಿ ಓಲಾ, ಉಬರ್‌ಗಳಿಗೆ ಹೆಚ್ಚಿದ ಡಿಮ್ಯಾಂಡ್‌

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವ್‌ ಮಾಡಿರುವ ಅಭಿಮಾನಿ ಯುವಕ, ಬ್ಯಾನರ್ ಹಿಡಿದು ಎಚ್.ಡಿ. ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದಾನೆ. “2023 ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಕುಮಾರಣ್ಣ” ಎಂದು ಪ್ರದರ್ಶನ ಮಾಡಿದ್ದಾನೆ.

ಕಡಲಾಳದಲ್ಲಿ ಅಭಿಮಾನಿಯ ಸಾಹಸ; ವಿಡಿಯೊ ಇಲ್ಲಿದೆ

ವಿಡಿಯೊ ವೈರಲ್‌

ಈಗ ಅಭಿಮಾನಿ ಯುವಕನ ಈ ಪ್ರಚಾರದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೇತ್ರಾಣಿ ದ್ವೀಪದ ಆಳಕ್ಕೆ ಹೋಗಿದ್ದ ಯುವಕ ಅಲ್ಲಿ ಬ್ಯಾನರ್‌ ಅನ್ನು ಪ್ರದರ್ಶನ ಮಾಡಿದ್ದಾನೆ. ಕುಮಾರಸ್ವಾಮಿ ಮತ್ತೊಮ್ಮೆ ಆರಿಸಿ ಬರಬೇಕು ಎಂದು ಮನವಿ ಮಾಡಿದ್ದಾನೆ. ಆದರೆ, ಈ ಯುವಕ ಯಾರು? ಎಲ್ಲಿಯವನು ಎಂಬುದು ತಿಳಿದುಬಂದಿಲ್ಲ.

ಕಡಲಾಳದಲ್ಲಿ ಸ್ಕೂಬಾ ಡೈವಿಂಗ್‌ ಮೂಲಕ ವಿಶಿಷ್ಟ ಮತದಾನ ಜಾಗೃತಿ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನಿಂದ ಸ್ವೀಪ್ ಕಾರ್ಯಕ್ರಮದಲ್ಲಿ ವಿನೂತನ ಜಾಗೃತಿ ಕಾರ್ಯಕ್ರಮವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು. ಕಡಲಾಳದಲ್ಲಿ ಅಪರೂಪದ ಹವಳ, ಜಲಚರಗಳ ನಡುವೆ ಮತದಾನ ಜಾಗೃತಿ ನಡೆಸಲಾಗಿತ್ತು. ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ವಿನೂತನವಾಗಿ ಪ್ರಯತ್ನವನ್ನು ನಡೆಸಲಾಗಿತ್ತು.

‘ಮತದಾನ ಸಂವಿಧಾನ ದೊರಕಿಸಿಕೊಟ್ಟ ಮಹತ್ವದ ಹಕ್ಕು’ ಎಂದು ಬರೆದ ಭಿತ್ತಿಚಿತ್ರವನ್ನು ಸ್ಕೂಬಾ ಡೈವಿಂಗ್‌ ಮಾಡುವ ಮೂಲಕ ಕಡಲಿನಾಳದಲ್ಲಿ ಹಿಡಿದು ಪ್ರದರ್ಶಿಸಿ ಅದನ್ನು ದಾಖಲೀಕರಿಸಿಕೊಳ್ಳಲಾಗಿತ್ತು. ಇದರ ಫೋಟೊ ಹಾಗೂ ವಿಡಿಯೊಗಳನ್ನು ಮತದಾನದ ಉತ್ತೇಜನಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಭಟ್ಕಳ ತಾಲೂಕು ಪಂಚಾಯತ್‌, ಸ್ಕೂಬಾ ಡೈವಿಂಗ್ ಅಡ್ವೆಂಚರ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗಿತ್ತು.

ಇದನ್ನೂ ಓದಿ: Karnataka Election : ಏನಿಲ್ಲ, ಏನಿಲ್ಲ.. ನನ್ನ-ನಿನ್ನ ನಡುವೆ ಏನಿಲ್ಲ; ಸಿದ್ದು-ಡಿಕೆಶಿ ನಡುವಿನ ಆತ್ಮೀಯ ಮಾತುಕತೆ ವಿಡಿಯೊ ರೆಡಿ!

ಮುರ್ಡೇಶ್ವರದ ಬಳಿಯ ನೇತ್ರಾಣಿ ದ್ವೀಪದ ಬಳಿ ಕರ್ನಾಟಕದ ಖ್ಯಾತ ಸ್ಕೂಬಾ ಡೈವಿಂಗ್‌ ಸಾಹಸ ಕ್ರೀಡೆ ಅವಕಾಶವಿದೆ. ಇಲ್ಲಿ ಸ್ಕೂಬಾ ಅಡ್ವೆಂಚರ್‌ಗಾಗಿ ರಾಜ್ಯದ ಹಾಗೂ ದೇಶದ ಎಲ್ಲೆಡೆಗಳಿಂದ ಸಾಹಸಪ್ರಿಯರು ಆಗಮಿಸುತ್ತಾರೆ. ಸಾಗರದಡಿಯ ಹವಳದ ದಿಬ್ಬಗಳೂ ನೇತ್ರಾಣಿ ದ್ವೀಪದ ಬಳಿ ಇವೆ.

Exit mobile version