Site icon Vistara News

Heavy Rain | ಮಾರ್ಕಂಡೇಯನಿಂದ ಅಡವಿಸಿದ್ದೇಶ್ವರ ಶ್ರೀಮಠಕ್ಕೆ ದಿಗ್ಬಂಧನ!

heavy rain

ಚಿಕ್ಕೋಡಿ: ಇಲ್ಲಿನ ಗೋಕಾಕ ತಾಲೂಕಿನ ಕುಂದರಗಿ ಗ್ರಾಮಲ್ಲಿರುವ ಅಡವಿಸಿದ್ದೇಶ್ವರ ಶ್ರೀಮಠವು ಮಳೆ ನೀರಿನಿಂದ (Heavy Rain) ಜಲಾವೃತಗೊಂಡಿದೆ. ಅಪಾಯ ಮಟ್ಟ ಮೀರಿ ಮಾರ್ಕಂಡೇಯ ನದಿ ನೀರು ಹರಿಯುತ್ತಿದ್ದು, ಅಡವಿಸಿದ್ದೇಶ್ವರ ಶ್ರೀಮಠ ಬಾಹ್ಯ ಸಂಪರ್ಕ ‌ಕಳೆದುಕೊಂಡಿದೆ.

ಅಡವಿಸಿದ್ದೇಶ್ವರ ಶ್ರೀಮಠದ ಅಮರಸಿದ್ದೇಶ್ವರ ಸ್ವಾಮೀಜಿ.

ಮಾರ್ಕಂಡೇಯ ನದಿಗೆ ನೀರು ಹೆಚ್ಚಾಗಿದ್ದರಿಂದ ಮಠದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ‌ನೀರು ನುಗ್ಗಿ ಮಠದ ಆವರಣ ಪ್ರವೇಶಿಸಿದ್ದು, ಅಡವಿಸಿದ್ದೇಶ್ವರ ಅಮರಸಿದ್ದೇಶ್ವರ ಸ್ವಾಮೀಜಿ ಸೇರಿ 10ಕ್ಕೂ ಹೆಚ್ಚು ಮಂದಿ ಮಠದಲ್ಲಿಯೇ ಉಳಿಯುವಂತಾಗಿದೆ. ಮಳೆಯ ಅಬ್ಬರ ಮುಂದುವರಿದರೆ ನೀರು ಹೆಚ್ಚಾಗಿ ಮಠದೊಳಗೆ ಪ್ರವೇಶಿಸುವ ಆತಂಕ ಎದುರಾಗಿದೆ.

ಇದನ್ನೂ ಓದಿ | Heavy Rain | ಸತತ ಮಳೆಗೆ ಮುಂದುವರಿದ ಮನೆ ಕುಸಿತ ಅವಘಡ; ಬೆಳಗಾವಿಯಲ್ಲಿ ಜನಜೀವನ ಅಸ್ತವ್ಯಸ್ತ

Exit mobile version