Site icon Vistara News

Heavy Rain | ಚಲಿಸುತ್ತಿದ್ದ ಕಾರಿಗೆ ಬೃಹತ್‌ ಮರ ಬಿದ್ದು ರಾಮನಗರದಲ್ಲಿ ವ್ಯಕ್ತಿ ಸಾವು

heavy rain

ರಾಮನಗರ: ಭಾರಿ ಮಳೆಯಿಂದ (heavy rain ) ಸಾವು-ನೋವು ಮುಂದುವರಿದಿದ್ದು, ಇಲ್ಲಿನ ಬಿಡದಿ ಹೋಬಳಿ ತೊರೆದೊಡ್ಡಿ ಗ್ರಾಮದಲ್ಲಿ ಬೃಹತ್‌ ಮರವೊಂದು ಕಾರಿನ ಮೇಲೆ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ.

ತಡರಾತ್ರಿ ಸುರಿದ ಭಾರಿ ಮಳೆಗೆ ರಸ್ತೆ ಬದಿಯಲ್ಲಿ ನೀರು ನಿಂತಿದೆ. ಅಲ್ಲದೆ, ರಸ್ತೆ ಪಕ್ಕದಲ್ಲಿದ್ದ ಬೃಹತ್‌ ಮರದ ಬೇರುಗಳು ತೀರಾ ತೇವಗೊಂಡಿದೆ. ಪರಿಣಾಮ ಅದರ ಬೇರುಗಳು ಸಡಿಲಗೊಂಡಿದ್ದು, ನೆಲಕ್ಕುರುಳಿದೆ. ಇದೇ ಸಮಯದಲ್ಲಿ ಕಾರು ಬಂದಿದ್ದು, ಕಾರಿನ ಮೇಲೆ ಮರ ಉರುಳಿದೆ. ಈ ಹಿನ್ನೆಲೆಯಲ್ಲಿ ಕಾರಿನ ಒಳಗಡೆ ಇದ್ದ ರಾಮನಗರ ತಾಲೂಕಿನ ಇಟ್ಟಮಡು ಗ್ರಾಮದ ಬೋರೆಗೌಡ (56) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೋರೆಗೌಡ ಅವರು ತೋಟಕ್ಕೆ ಹೋಗುತ್ತಿದ್ದಾಗ ಮರ ಬಿದ್ದ ರಭಸಕ್ಕೆ ಕಾರು ಜಖಂಗೊಂಡಿದೆ. ಅವರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿತ್ತು. ಆದರೆ, ಹೊರಬರಲು ಆಗದೇ ಅಲ್ಲೇ ಮೃತಪಟ್ಟಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬುಡಸಮೇತ ಕಾರಿನ ಮೇಲೆ ಬಿದ್ದ ಮರವನ್ನು ತೆರವು ಮಾಡಲಾಗುತ್ತಿದೆ.

ಇದನ್ನೂ ಓದಿ | Rain News | ಹಾವೇರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜನರ ಪರದಾಟ; ಸಂಪರ್ಕ ಕಡಿತ

Exit mobile version