Site icon Vistara News

Kidnap Case: ಹಾನಗಲ್‌ನಲ್ಲಿ ಮುಸ್ಲಿಂ ಮಹಿಳೆ ರೇಪ್ ಕೇಸ್‌ ಬೆನ್ನಲ್ಲೇ ಹಿಂದು ಯುವತಿಯ ಕಿಡ್ನ್ಯಾಪ್‌!

Kidnap Case

ಹಾವೇರಿ: ಹಾನಗಲ್‌ನಲ್ಲಿ ಮುಸ್ಲಿಂ ಮಹಿಳೆ ಗ್ಯಾಂಗ್ ರೇಪ್ ಪ್ರಕರಣ ಬೆನ್ನಲ್ಲೇ ಹಿಂದು ಯುವತಿಯನ್ನು ಕಿಡ್ನ್ಯಾಪ್‌ ಮಾಡಿರುವ ಘಟನೆ ನಡೆದಿದೆ. ಹಿಂದು ಯುವತಿಯನ್ನು ಮುಸ್ಲಿಂ ಯುವಕ ಕಿಡ್ನ್ಯಾಪ್ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾನಗಲ್ ನಿವಾಸಿ ಅಪ್ತಾಬ್ ಎಂಬ ಯುವಕನ ವಿರುದ್ಧ ಕಿಡ್ನ್ಯಾಪ್ ಕೇಸ್‌ ದಾಖಲಾಗಿದೆ. ಹಾನಗಲ್ ಶಹರದ ಹಂಚಿ ಓಣಿಯ ನಿವಾಸಿ ಮೇಘರಾಜ ಕಲಾಲ ಎಂಬುವವರು ತನ್ನ 20 ವರ್ಷದ ಮಗಳನ್ನು ಕಿಡ್ನ್ಯಾಪ್‌ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಮಲ್ಲಿಗಾರ್ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ‌ನಲ್ಲಿ ಬಿ.ಕಾಂ ಮೂರನೇ ವರ್ಷ ಓದುತ್ತಿದ್ದ ಮಗಳು, ಜನವರಿ 11 ರಂದು ಮನೆಯಿಂದ ಕಾಲೇಜಿಗೆ ಹೋಗಿದ್ದವಳು ತಿರುಗಿ ಮನೆಗೆ ಬಂದಿಲ್ಲ. ಹಾನಗಲ್‌ನ ಫೋಟೊಗ್ರಾಫರ್‌ ಅಫ್ತಾಬ್ ಎಂಬ ಯುವಕನೇ ಅಪಹರಣ ಮಾಡಿರಬಹುದು ಎಂಬ ಸಂಶಯವಿದೆ. ಹೀಗಾಗಿ ಮಗಳನ್ನು ರಕ್ಷಿಸಬೇಕು ಎಂದು ಹಾನಗಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ | Chikkamagaluru News: ಕೊಲೆ ಯತ್ನ ಕೇಸ್‌ ಆರೋಪಿ ಆಸ್ಪತ್ರೆಯಿಂದ ಎಸ್ಕೇಪ್

ನೈತಿಕ ಪೊಲೀಸ್‌ಗಿರಿಗೆ ಬಿಗ್‌ ಟ್ವಿಸ್ಟ್; ಪುಂಡರಿಂದ ಯುವತಿಯ ಗ್ಯಾಂಗ್‌ರೇಪ್‌

ಹಾವೇರಿ: ಜನವರಿ 8ರಂದು ಹಾನಗಲ್‌ನ ಲಾಡ್ಜ್‌ (Attack in Lodge) ಒಂದರಲ್ಲಿ ಜತೆಗಿದ್ದ ಮುಸ್ಲಿಂ ಮಹಿಳೆ (Muslim Woman) ಮತ್ತು ಹಿಂದು ಪುರುಷನ ಮೇಲೆ ನೈತಿಕ ಪೊಲೀಸ್‌ಗಿರಿ (Moral Policing) ನಡೆಸಿದ್ದ ಮುಸ್ಲಿಂ ಪುಂಡ ಯುವಕರು ಆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿರುವ ಭಯಾನಕ ಘಟನೆ ಈಗ ಬೆಳಕಿಗೆ ಬಂದಿದೆ.

ಶಿರಸಿ ಮೂಲದ ಮುಸ್ಲಿಂ ಮಹಿಳೆ ಮತ್ತು ಅವಿವಾಹಿತ ಯುವಕ ಹಾನಗಲ್‌ ಲಾಡ್ಜ್‌ನಲ್ಲಿರುವುದನ್ನು ರಿಕ್ಷಾ ಚಾಲಕನೊಬ್ಬನ ಮೂಲಕ ತಿಳಿದ ಮುಸ್ಲಿಂ ಯುವಕರು ಅಲ್ಲಿಗೆ ಧಾವಿಸಿ ಕೋಣೆಯೊಳಗಿನ ಟ್ಯಾಪ್‌ ರಿಪೇರಿ ಮಾಡುವ ನೆಪದಲ್ಲಿ ಒಳಗೆ ಹೋಗಿ ಇಬ್ಬರನ್ನೂ ಚೆನ್ನಾಗಿ ಥಳಿಸಿದ್ದರು.

ಬಳಿಕ ಯುವಕನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿ ಎಲ್ಲೋ ಹಲ್ಲೆ ಮಾಡಿ ಬಿಟ್ಟಿದ್ದರು. ಈ ನಡುವೆ, ಯುವತಿಯನ್ನು ಒಂದು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದ ಅವರು ಬಳಿಕ ರಸ್ತೆಯಲ್ಲಿ ತಂದು ಬಿಟ್ಟಿದ್ದರು. ಆದರೆ, ಹೀಗೆ ಕಾರಿನಲ್ಲಿ ಕರೆದುಕೊಂಡು ಹೋದ ಪುಂಡ ಯುವಕರು ಆಕೆಯನ್ನು ನದಿ ತೀರದಲ್ಲಿ ಮತ್ತು ಕಾಡಿನಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂಬ ಅಂಶ ಬಯಲಾಗಿದೆ. ಸ್ವತಃ ಸಂತ್ರಸ್ತ ಮಹಿಳೆಯೇ ಈ ವಿಚಾರವನ್ನು ಹೇಳಿದ್ದು, ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾಳೆ.

ಆವತ್ತು ಹೋಟೆಲ್‌ಗೆ ನುಗ್ಗಿ ದಾಳಿ ಮಾಡಿದ ಮುಸ್ಲಿಂ ಯುವಕರು ಬಳಿಕ ನನ್ನನ್ನು ಒಂದು ಕಾರಿನಲ್ಲಿ ಕರೆದುಕೊಂಡು ಹೋದರು. ದಾರಿಯುದ್ದಕ್ಕೂ ನನ್ನ ಮೇಲೆ ಹಲ್ಲೆ ಮಾಡಿದ ಅವರು, ಮೊದಲು ಒಂದು ನದಿ ತೀರಕ್ಕೆ ಎಳೆದುಕೊಂಡು ಹೋದರು. ಅಲ್ಲಿ ನನ್ನ ಮೇಲೆ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದರು. ಬಳಿಕ ಒಂದು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಕೂಡಾ ಬೇಡ ಬೇಡ ಎಂದು ಹೇಳಿದರೂ ಕೇಳದೆ ದೌರ್ಜನ್ಯ ನಡೆಸಿದರು ಎಂದು ಮಹಿಳೆ ತಿಳಿಸಿದ್ದಾರೆ.

ಹೀಗೆ ಏಳು ಜನ ಸತತವಾಗಿ ಅತ್ಯಾಚಾರ ಮಾಡಿದ ಬಳಿಕ ರಸ್ತೆ ಬಳಿ ಕರೆದುಕೊಂಡು ಬಂದು ಶಿರಸಿ ಬಸ್‌ ಹತ್ತಿಸಿದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಈ ರೀತಿ ದೌರ್ಜನ್ಯ ಮಾಡಿರುವವರು ಅಕ್ಕಿ ಆಲೂರಿನ ಯುವಕರು ಎಂದು ಹೇಳಿರುವ ಆಕೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ | Divya Pahuja: ದಿವ್ಯಾ ಪಹುಜಾ ಶವ ಪತ್ತೆ; ಕಾಲುವೆಯಲ್ಲಿತ್ತು ಮಾಜಿ ರೂಪದರ್ಶಿಯ ಮೃತದೇಹ

ಈ ನಡುವೆ ತನ್ನ ಪತ್ನಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಆಕೆಯ ಪತಿ ಕೂಡಾ ಆರೋಪ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version