Site icon Vistara News

Hit And Run: ಕುಡಿದ ಮತ್ತಲ್ಲಿ ಹಿಟ್‌ ಆ್ಯಂಡ್‌ ರನ್‌;‌ ಬೈಕ್‌ ಸವಾರ ಬಿದ್ದು ಸತ್ತರೂ ನೋಡದೆ ಹೋದ ಕಾರು ಚಾಲಕ

Hit And Run In Bengaluru

Hit And Run In Bengaluru, A Youth Dies

ಬೆಂಗಳೂರು: ರಾಜ್ಯ ರಾಜಧಾನಿಯ ಮೈಸೂರು ರಸ್ತೆಯಲ್ಲಿರುವ ನಾಯಂಡಹಳ್ಳಿ ಬಳಿ ಹಿಟ್‌ ಆ್ಯಂಡ್‌ ರನ್‌ಗೆ ಯುವಕನೊಬ್ಬ (Hit And Run) ಬಲಿಯಾಗಿದ್ದಾನೆ. ಭಾನುವಾರ ತಡರಾತ್ರಿ ಬೈಕ್‌ಗೆ ಕಾರು ಡಿಕ್ಕಿಯಾಗಿದ್ದು, ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕ ಬೈಕ್‌ ಸವಾರ ಬಿದ್ದಿದ್ದನ್ನೂ ನೋಡಿಯೂ ಹಾಗೆಯೇ ಹೋಗಿದ್ದಾನೆ. ಬಳಿಕ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.

ವಿಶ್ವಪ್ರಿಯ ಅಪಾರ್ಟ್‌ಮೆಂಟ್‌ ಬಳಿ ರಾತ್ರಿ 1.45ರ ಸುಮಾರಿಗೆ ಅಪಘಾತ ನಡೆದಿದೆ. ಮೃತ ಯುವಕನನ್ನು ಎಚ್‌.ಡಿ.ಕೋಟೆ ಮೂಲದ ಪ್ರಸನ್ನ ಕುಮಾರ್‌ ಎಂದು ತಿಳಿದುಬಂದಿದೆ. ಖಾಸಗಿ ಕಂಪನಿಯಲ್ಲಿ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿರುವ ವಿನಾಯಕ್‌ ಹಿಟ್‌ ಆ್ಯಂಡ್‌ ರನ್‌ ಮಾಡಿದವ.

ಅಂಜನಾನಗರದ ಸ್ವಾತಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಸನ್ನ ಕುಮಾರ್ ಬೈಕ್‌ ಚಲಾಯಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಪ್ರಸನ್ನ ಕುಮಾರ್‌ 50 ಮೀಟರ್‌ ದೂರ ಹಾರಿ ಬಿದ್ದಿದ್ದ. ಬೈಕ್‌ಅನ್ನು ಸಹ ರಸ್ತೆಯಲ್ಲೇ ವಿನಾಯಕ್‌ ಕಾರು ಉಜ್ಜಿಕೊಂಡಿದ್ದ ಹೋಗಿದೆ. ಇಷ್ಟಾದರೂ ಹಿಂತಿರುಗಿಯೂ ನೋಡದೆ ಕಾರು ಚಲಾಯಿಸಿಕೊಂಡು ವಿನಾಯಕ್‌ ಹೋಗಿದ್ದ.

ಇದನ್ನೂ ಓದಿ: Road accident : ಬೈಕ್‌- ಸ್ಕೂಟರ್‌ ನಡುವೆ ಅಪಘಾತ; ಕಾಲೇಜು ವಿದ್ಯಾರ್ಥಿನಿ ದಾರುಣ ಸಾವು

ಅಪಘಾತ ಮಾಡಿ, ಕಾರು ನಿಲ್ಲಿಸದೆ ಹೋಗುತ್ತಿದ್ದನ್ನು ಕಂಡ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿದ್ದಾರೆ. ಆಕ್ರೋಶಗೊಂಡ ಜನ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಕಾರು ಕೂಡ ಜಖಂ ಆಗಿದೆ. ರಾತ್ರಿ ಪಾರ್ಟಿ ಮಾಡಿ, ಮೂವರು ಯುವತಿಯರೊಂದಿಗೆ ವಿನಾಯಕ್‌ ತೆರಳುತ್ತಿದ್ದ ಎಂದು ತಿಳಿದುಬಂದಿದೆ. ಸಾರ್ವಜನಿಕರು ವಿನಾಯಕ್‌ ಕಾರು ಅಡ್ಡಗಟ್ಟಿ, ಅವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬ್ಯಾಟರಾಯನಪುರ ಸಂಚಾರ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಕುಡಿದು ಕಾರು ಚಾಲನೆ ಮಾಡುತ್ತಿರುವುದು ದೃಢವಾಗಿದೆ ಎಂದು ತಿಳಿದುಬಂದಿದೆ.

Exit mobile version