Site icon Vistara News

ವಿಸ್ತಾರ ನ್ಯೂಸ್ ಕಚೇರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ, ಶುಭ ಹಾರೈಕೆ

araga jnanedra visits vistara news

ಬೆಂಗಳೂರು: ವಿಸ್ತಾರ ನ್ಯೂಸ್ ಕಚೇರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಭೇಟಿ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಧ್ಯಮ ರಂಗದಲ್ಲಿ ಈಗಾಗಲೇ ಖ್ಯಾತಿ ಗಳಿಸಿರುವ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ನೂತನ ಮಾಧ್ಯಮ ಸಂಸ್ಥೆ ‘ವಿಸ್ತಾರ’ ಆರಂಭವಾಗಿರುವುದು ಅತ್ಯಂತ ಸಂತಸದ ಸಂಗತಿ. ಈ ಮಾಧ್ಯಮ ಸಂಸ್ಥೆ ಯಶಸ್ಸು ಕಾಣಲಿ. ಮಾಧ್ಯಮ ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಲಿ ಎಂದರು.

ವಿಸ್ತಾರ ಮೀಡಿಯಾದಿಂದ ಈಗಾಗಲೇ ಆರಂಭವಾಗಿರುವ ನ್ಯೂಸ್ ವೆಬ್‌ಸೈಟ್ ಮತ್ತು ಹಣಕಾಸು, ಆರೋಗ್ಯ, ಅಧ್ಯಾತ್ಮ ಕುರಿತ ಯುಟ್ಯೂಬ್ ಚಾನೆಲ್ ಗಳು ಉತ್ತಮ ಗುಣಮಟ್ಟದಿಂದ ಗಮನ ಸೆಳೆಯುತ್ತಿವೆ. ಶೀಘ್ರವೇ ಆರಂಭವಾಗಲಿರುವ ಟಿವಿ ಚಾನೆಲ್ ಕೂಡ ಜನಮೆಚ್ಚುಗೆ ಪಡೆಯುವುದು ಖಚಿತ ಎಂದು ಸಚಿವರು ಅಭಿಪ್ರಾಯಪಟ್ಟರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದ ಹರಿಪ್ರಕಾಶ್ ಕೋಣೆಮನೆ, ಎಚ್. ವಿ. ಧರ್ಮೇಶ್ ಮತ್ತು ಶ್ರೀನಿವಾಸ ಹೆಬ್ಬಾರ್.

ನಾಡಿನ ಜನತೆಯ ದನಿಯಾಗಿ ವಿಸ್ತಾರ ಮೀಡಿಯಾ ಮೆರೆಯಲಿ. ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಲಿ. ಸೃಜನಶೀಲ ಮತ್ತು ವಿಭಿನ್ನ ಕಾರ್ಯಕ್ರಮಗಳಿಂದ ಖ್ಯಾತಿಯ ಉತ್ತುಂಗಕ್ಕೆ ಏರಲಿ ಎಂದು ಆರಗ ಜ್ಞಾನೇಂದ್ರ ಆಶಿಸಿದರು.

ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ವಿಸ್ತಾರ ಮೀಡಿಯಾದ ಚೇರ್ಮನ್ ಮತ್ತು ಎಂಡಿ ಎಚ್. ವಿ. ಧರ್ಮೇಶ್, ನಿರ್ದೇಶಕ ಶ್ರೀನಿವಾಸ ಹೆಬ್ಬಾರ್, ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ. ಎಸ್. ಜತೆಗಿದ್ದರು.

ಇದನ್ನೂ ಓದಿ | ವಿಸ್ತಾರ ನ್ಯೂಸ್‌ಗೆ ಶುಭ ಹಾರೈಸಿದ ವಾಗ್ದೇವಿ ಶಿಕ್ಷಣ ಸಮೂಹದ ಚೇರ್ಮನ್‌ ಹರೀಶ್

Exit mobile version