Site icon Vistara News

ಪರಿಸರಕ್ಕೆ ಧಕ್ಕೆಯಾಗದೇ ಹೊಸಪೇಟೆ ಸುರಂಗ ಮಾರ್ಗ ನಿರ್ಮಾಣ: ಸಚಿವ ನಿತಿನ್‌ ಗಡ್ಕರಿ ಮೆಚ್ಚುಗೆ

hospet subway

ವಿಜಯನಗರ: ಹೊಸಪೇಟೆ ಹೊರವಲಯದಲ್ಲಿರುವ ಸುರಂಗದ ಮಾರ್ಗವು ಮೂಲಸೌಕರ್ಯಗಳ ವಿಸ್ಮಯವೆಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಶ್ಲಾಘಿಸಿದ್ದು, ಫೋಟೋಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸುರಂಗ ರಸ್ತೆ ನಿರ್ಮಾಣ ಮಾಡಿದ ಜಾಗದಲ್ಲಿ ಅಪಾರ ಪ್ರಮಾಣದ ವನ್ಯ ಸಂಪತ್ತು ಇದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಿರ್ಮಾಣ ಮಾಡುವ ವೇಳೆ ಪರಿಸರಕ್ಕೆ ಧಕ್ಕೆಯಾಗದ ರೀತಿ ಸುರಂಗ ಕೊರೆದು ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಟೀಟ್ವ್‌

ವಿಜಯನರ ಜಿಲ್ಲೆಯ ಹೊಸಪೇಟೆ ಮಾರ್ಗವಾಗಿ ಹುನಗುಂದ ಮೂಲಕ ಚತುಷ್ಪಥ ರಸ್ತೆ ಕಾಮಗಾರಿ ಈಗಾಗಲೇ ಆರಂಭ ಆಗಿದೆ. ಈ ಮೂಲಕ ಮಹಾರಾಷ್ಟ್ರ ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ನಿತಿನ್ ಗಡ್ಕರಿ ಫೋಟೋಗಳನ್ನು ಹಾಕಿದ್ದಾರೆ. ಈ ಸುರಂಗ ಮಾರ್ಗದ ಪಕ್ಕದಲ್ಲಿಯೇ ಕಲ್ಯಾಣ ಕರ್ನಾಟಕ ಹಾಗೂ ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯವಿದ್ದು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ದೆಹಲಿ ಮೂಲದ ಒಎಸ್ಇ ಸಂಸ್ಥೆಯು 2014ರಿಂದ ಈ ಸುರಂಗ ಕಾಮಗಾರಿ ಆರಂಭಿಸಿತ್ತು.

ಇದನ್ನೂ ಓದಿ | ಸುರಂಗ ಮಾರ್ಗ ಉದ್ಘಾಟಿಸಿ, ಕಸ ಹೆಕ್ಕಿದ ಪ್ರಧಾನಿ ಮೋದಿ; ವಿಡಿಯೋ ವೈರಲ್‌

Exit mobile version